‘ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶವು ಶೇಕಡ 83 ರಿಂದ ಶೇ 53ಕ್ಕೆ ಕುಸಿದಿದೆ. ಪರೀಕ್ಷಾ ವಿಧಾನದಲ್ಲಿ ದಿಢೀರ್ ಬದಲಾವಣೆಯು ಒಂದು ಇಡೀ ಪೀಳಿಗೆಯ ಮನೋಸ್ಥೈರ್ಯವನ್ನು ಕಂಗೆಡಿಸುವ ಸಂಗತಿ. ಇಂತಹ ಬದಲಾವಣೆಗೂ ಮುನ್ನ ಸಮಗ್ರ ಆಲೋಚನೆ ಇರಬೇಕಾಗಿತ್ತು. ಪರೀಕ್ಷೆಯಲ್ಲಿ ಬದಲಾವಣೆ ತಂದು, ನಂತರ ಕೃಪಾಂಕ ನೀಡಿ 1.79 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾಡಿರುವುದು ಆಡಳಿತ ವ್ಯವಸ್ಥೆಯ ಲೋಪದೋಷ ಮತ್ತು ನೀತಿ ನಿರೂಪಕರು ಜವಾಬ್ದಾರಿ ರಹಿತರಂತೆ ವರ್ತಿಸಿರುವುದನ್ನು ಬಯಲು ಮಾಡಿದೆ’ ಎಂದು ಪತ್ರದಲ್ಲಿ ಟೀಕಿಸಿದ್ದಾರೆ.