‘ಕೆ.ಆರ್.ಪುರದ ಸುರೇಶ್ಕುಮಾರ್, ರಾಜಾಜಿನಗರದ ರಾಮಕೃಷ್ಣ, ಆನೇಕಲ್ನ ಮಂಜುನಾಥ್, ಹೊಂಗಸಂದ್ರದ ವೆಂಕಟೇಶ್, ದೇವಾನಂದ ಬಂಧಿತರು' ಎಂದೂ ತಿಳಿಸಿದರು. ‘₹ 500 ಹಾಗೂ ₹ 1,000 ಮುಖಬೆಲೆಯ ಹಳೇ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿಸುತ್ತಿದ್ದ ಆರೋಪಿಗಳು, ಕಂತೆಗಳನ್ನಾಗಿ ಮಾಡುತ್ತಿದ್ದರು. ಕಂತೆಯ ಮೇಲೆ ಹಾಗೂ ಕೊನೆಯಲ್ಲಿ ಮಾತ್ರ ಅಸಲಿ ನೋಟುಗಳನ್ನು ಇರಿಸುತ್ತಿದ್ದರು. ಇಂಥ ಕಂತೆಗಳನ್ನೇ ಕೇರಳದ ಬೇನೂರು– ಕುಂದಡುಕ್ಕಂ ರಸ್ತೆಯಲ್ಲಿರುವ ಫಾರ್ಮ್ಹೌಸ್ನಲ್ಲಿ ಇರಿಸಿದ್ದರು.