‘ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಕೆ.ಆರ್.ಶ್ರೀನಿವಾಸ್ ನೇತೃತ್ವದ ತಂಡ ವಿಮಾನ ನಿಲ್ದಾಣ ಪ್ರದೇಶದಲ್ಲಿ ಈ ಬಗ್ಗೆ 40 ತಿಂಗಳ ಕಾಲ ಅಧ್ಯಯನ ನಡೆಸಲಿದೆ. ಮಂಜು ಮುಸುಕುವ ಸಮಯ, ವಾತಾವರಣದಲ್ಲಿ ದೂಳಿನ ಕಣಗಳು ಸೇರುವ ಪ್ರಮಾಣ, ಹವಾಮಾನ ಬದಲಾವಣೆ, ತಾಪಮಾನ ಮಾಪನ, ವಿಕಿರಣ ಅಳೆಯುವುದು, ಆಗಸ ಪರಿಶೀಲನೆ (ಟೋಟಲ್ ಸ್ಕೈ ಸ್ಕ್ಯಾನರ್) ಸಂಬಂಧಿಸಿd ಸೂಕ್ತ ಸಲಕರಣೆಗಳನ್ನು ಅಳವಡಿಸಿ ಅಧ್ಯಯನ ನಡೆಸಲಾಗುವುದು’ ಎಂದು ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ.ನಾಗರಾಜ್ ಹೇಳಿದರು.