ಬಳಿಕ ಮಾತನಾಡಿದ ಜಯರಾಂ, ‘ಇದು ನವೋದ್ಯಮಿಗಳಿಗೆ ಉತ್ತಮವಾದ ವೇದಿಕೆಯಾಗಿದೆ. ಅವರಲ್ಲಿನ ಆಲೋಚನೆಗಳಿಗೆ ಮೂರ್ತ ರೂಪ ನೀಡುವ ಕೆಲಸವನ್ನು ಈ ವಿಕಸನ ಮಾಡಲಿದೆ. ಈ ಕೇಂದ್ರದಲ್ಲಿರುವ ಮಾರ್ಗದರ್ಶಕರು ಈ ಹಿಂದೆ ಹಲವು ನವೋದ್ಯಮಗಳನ್ನು ಆರಂಭಿಸಿ ಯಶಸ್ವಿಯಾಗಿ ನಡೆಸಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಹೆಚ್ಚು ಅನುಭವ ಹೊಂದಿದ್ದಾರೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.