<p><strong>ಬೆಂಗಳೂರು</strong>: ನಗರದ ಯಶವಂತಪುರದಲ್ಲಿನ ರೈಲು ಮತ್ತು ಮೆಟ್ರೊ ನಿಲ್ದಾಣದ ನಡುವೆ ಪ್ರಯಾಣಿಕರಿಗೆ ಬಹುಮಾದರಿ ಸಂಚಾರ ಸೌಲಭ್ಯ ಶೀಘ್ರದಲ್ಲಿಯೇ ದೊರಕಲಿದೆ. ಈ ಕುರಿತ ಒಪ್ಪಂದಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ನೈರುತ್ಯ ರೈಲ್ವೆಯೊಂದಿಗೆ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿದೆ.</p>.<p>ಯಶವಂತಪುರವು ನೈರುತ್ಯ ರೈಲ್ವೆಯ ಪ್ರಮುಖ ನಿಲ್ದಾಣ. ಕೈಗಾರಿಕಾ, ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮಧ್ಯೆ ಈ ನಿಲ್ದಾಣವಿದೆ. ಮೆಟ್ರೊ ಮತ್ತು ಈ ನಿಲ್ದಾಣದ ನಡುವೆ ಹೆಚ್ಚು ಜನ ಪ್ರಯಾಣಿಸುತ್ತಾರೆ. ಒಪ್ಪಂದದ ಅನ್ವಯ, ಈ ನಿಲ್ದಾಣಗಳ ನಡುವೆ 82 ಮೀಟರ್ ಉದ್ದದ ಹೊಸ ಮೇಲ್ಸೇತುವೆ ನಿರ್ಮಿಸಲಾಗುತ್ತದೆ.</p>.<p>ನೈರುತ್ಯ ರೈಲ್ವೆ ಪ್ಲಾಟ್ಫಾರಂ ಮತ್ತು ಮೆಟ್ರೊ ನಿಲ್ದಾಣದೊಳಗೆ ನೇರವಾಗಿ ತಲುಪಲು ಮತ್ತೊಂದು ಮೇಲ್ಸೇತುವೆ ನಿರ್ಮಾಣವು ಸೇರಿದಂತೆ, ಉಭಯ ನಿಲ್ದಾಣಗಳ ನಡುವೆ ತಡೆರಹಿತ ಸಂಚಾರಕ್ಕಾಗಿ ಹಲವು ಕಾಮಗಾರಿಗಳನ್ನು ಉಭಯ ಸಂಸ್ಥೆಗಳು ಕೈಗೆತ್ತಿಕೊಳ್ಳಲಿವೆ.</p>.<p><strong>ಏನೇನು ಬರಲಿದೆ?</strong></p>.<p>* ನೈರುತ್ಯ ರೈಲ್ವೆ ಪಾದಚಾರಿ ಮೇಲ್ಸೇತುವೆಯಿಂದ ಮೆಟ್ರೊ ನಿಲ್ದಾಣದ ಒಳಗಿನವರೆಗೆ 82 ಮೀಟರ್ ಉದ್ದದ ಮೇಲ್ಸೇತುವೆ</p>.<p>* ರೈಲ್ವೆ ನಿಲ್ದಾಣದ ಪಶ್ಚಿಮ ಭಾಗದಿಂದ ಪೂರ್ವ ಭಾಗಕ್ಕೆ 230 ಮೀಟರ್ ಉದ್ದದ ಹೊಸ ಪಾದಚಾರಿ ಮೇಲ್ಸೇತುವೆ</p>.<p>* ಮೆಟ್ರೊ ನಿಲ್ದಾಣದ ವಾಯವ್ಯ ಭಾಗದಿಂದ ರೈಲ್ವೆ ನಿಲ್ದಾಣಕ್ಕೆ ರಸ್ತೆಯಿಂದ ಪ್ರವೇಶ ಸೌಲಭ್ಯ</p>.<p>* ಬೆಂಗಳೂರು–ತುಮಕೂರು ರಸ್ತೆಯಿಂದ ರೈಲ್ವೆ ನಿಲ್ದಾಣವನ್ನು ಮೆಟ್ರೊ ನಿಲ್ದಾಣದ ಮಧ್ಯ ಭಾಗದಿಂದಲೇ ತಲುಪಲು ಅವಕಾಶ ಕಲ್ಪಿಸಲಾಗುತ್ತದೆ</p>.<p>* ಬಿಎಂಟಿಸಿ ಬಸ್ಗಳನ್ನು ನಿಲ್ಲಿಸಲು ತುಮಕೂರು–ಬೆಂಗಳೂರು ರಸ್ತೆಯ ನೈರುತ್ಯ ಮೂಲೆಯಲ್ಲಿ ಸ್ಥಳಾವಕಾಶ</p>.<p>* ಆಟೊ ನಿಲ್ದಾಣ ಸಾಮರ್ಥ್ಯ ವಿಸ್ತರಣೆ</p>.<p>* ಕಾರು, ಟ್ಯಾಕ್ಸಿ, ಆಟೊಗಳಿಗೆ ಪಿಕ್ ಅಪ್–ಡ್ರಾಪ್ ಸ್ಥಳಗಳು</p>.<p>* ಸೈಕಲ್ ಮತ್ತು ದ್ವಿಚಕ್ರ ಬಾಡಿಗೆ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ</p>.<p>* ನಿಲ್ದಾಣಗಳ ಮುಂದಿನ ಖಾಲಿ ಜಾಗದ ಸೌಂದರ್ಯೀಕರಣಕ್ಕೆ ಒತ್ತು</p>.<p><strong>ಹೈದರಾಬಾದ್ ಸಂಸ್ಥೆಗೆ ಗುತ್ತಿಗೆ</strong></p>.<p>ಪಾದಚಾರಿ ಮೇಲ್ಸೇತುವೆ ಮತ್ತು ವಾಹನ ನಿಲುಗಡೆ ಸೌಲಭ್ಯಗಳ ವಿನ್ಯಾಸದ ಗುತ್ತಿಗೆಯನ್ನು ಹೈದರಾಬಾದ್ನ ಆರ್ವಿ ಸಂಸ್ಥೆಗೆ ಬಿಎಂಆರ್ಸಿಎಲ್ ನೀಡಿದೆ. ನೈರುತ್ಯ ರೈಲ್ವೆಯು ಈಗಾಗಲೇ ಇತರೆ ಸೌಲಭ್ಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.</p>.<p><strong>ಸೋಪ್ ಫ್ಯಾಕ್ಟರಿಯಿಂದ–ಟಿಟಿಎಂಸಿಯವರೆಗೆ ಮೇಲ್ಸೇತುವೆ</strong></p>.<p>ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಿಂದ ಯಶವಂತಪುರದ ಬಿಎಂಟಿಸಿ ನಿಲ್ದಾಣದವರೆಗೆ 1,500 ಮೀಟರ್ ಉದ್ದದ ಪಾದಚಾರಿ ಮೇಲ್ಸೇತುವೆ ತಲೆ ಎತ್ತಲಿದೆ. ಇಲ್ಲಿಂದ, ಭಾರತೀಯ ವಿಜ್ಞಾನ ಸಂಸ್ಥೆಯವರೆಗೆ (ಐಐಎಸ್ಸಿ) ಸಂಪರ್ಕ ಕಲ್ಪಿಸುವ ಉದ್ದೇಶವಿದೆ. ಈ ಮೇಲ್ಸೇತುವೆಯ ವಿನ್ಯಾಸದ ಗುತ್ತಿಗೆಯನ್ನೂ ಆರ್ವೀ ಅಸೋಸಿಯೇಟ್ಸ್ಗೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಯಶವಂತಪುರದಲ್ಲಿನ ರೈಲು ಮತ್ತು ಮೆಟ್ರೊ ನಿಲ್ದಾಣದ ನಡುವೆ ಪ್ರಯಾಣಿಕರಿಗೆ ಬಹುಮಾದರಿ ಸಂಚಾರ ಸೌಲಭ್ಯ ಶೀಘ್ರದಲ್ಲಿಯೇ ದೊರಕಲಿದೆ. ಈ ಕುರಿತ ಒಪ್ಪಂದಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ನೈರುತ್ಯ ರೈಲ್ವೆಯೊಂದಿಗೆ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿದೆ.</p>.<p>ಯಶವಂತಪುರವು ನೈರುತ್ಯ ರೈಲ್ವೆಯ ಪ್ರಮುಖ ನಿಲ್ದಾಣ. ಕೈಗಾರಿಕಾ, ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮಧ್ಯೆ ಈ ನಿಲ್ದಾಣವಿದೆ. ಮೆಟ್ರೊ ಮತ್ತು ಈ ನಿಲ್ದಾಣದ ನಡುವೆ ಹೆಚ್ಚು ಜನ ಪ್ರಯಾಣಿಸುತ್ತಾರೆ. ಒಪ್ಪಂದದ ಅನ್ವಯ, ಈ ನಿಲ್ದಾಣಗಳ ನಡುವೆ 82 ಮೀಟರ್ ಉದ್ದದ ಹೊಸ ಮೇಲ್ಸೇತುವೆ ನಿರ್ಮಿಸಲಾಗುತ್ತದೆ.</p>.<p>ನೈರುತ್ಯ ರೈಲ್ವೆ ಪ್ಲಾಟ್ಫಾರಂ ಮತ್ತು ಮೆಟ್ರೊ ನಿಲ್ದಾಣದೊಳಗೆ ನೇರವಾಗಿ ತಲುಪಲು ಮತ್ತೊಂದು ಮೇಲ್ಸೇತುವೆ ನಿರ್ಮಾಣವು ಸೇರಿದಂತೆ, ಉಭಯ ನಿಲ್ದಾಣಗಳ ನಡುವೆ ತಡೆರಹಿತ ಸಂಚಾರಕ್ಕಾಗಿ ಹಲವು ಕಾಮಗಾರಿಗಳನ್ನು ಉಭಯ ಸಂಸ್ಥೆಗಳು ಕೈಗೆತ್ತಿಕೊಳ್ಳಲಿವೆ.</p>.<p><strong>ಏನೇನು ಬರಲಿದೆ?</strong></p>.<p>* ನೈರುತ್ಯ ರೈಲ್ವೆ ಪಾದಚಾರಿ ಮೇಲ್ಸೇತುವೆಯಿಂದ ಮೆಟ್ರೊ ನಿಲ್ದಾಣದ ಒಳಗಿನವರೆಗೆ 82 ಮೀಟರ್ ಉದ್ದದ ಮೇಲ್ಸೇತುವೆ</p>.<p>* ರೈಲ್ವೆ ನಿಲ್ದಾಣದ ಪಶ್ಚಿಮ ಭಾಗದಿಂದ ಪೂರ್ವ ಭಾಗಕ್ಕೆ 230 ಮೀಟರ್ ಉದ್ದದ ಹೊಸ ಪಾದಚಾರಿ ಮೇಲ್ಸೇತುವೆ</p>.<p>* ಮೆಟ್ರೊ ನಿಲ್ದಾಣದ ವಾಯವ್ಯ ಭಾಗದಿಂದ ರೈಲ್ವೆ ನಿಲ್ದಾಣಕ್ಕೆ ರಸ್ತೆಯಿಂದ ಪ್ರವೇಶ ಸೌಲಭ್ಯ</p>.<p>* ಬೆಂಗಳೂರು–ತುಮಕೂರು ರಸ್ತೆಯಿಂದ ರೈಲ್ವೆ ನಿಲ್ದಾಣವನ್ನು ಮೆಟ್ರೊ ನಿಲ್ದಾಣದ ಮಧ್ಯ ಭಾಗದಿಂದಲೇ ತಲುಪಲು ಅವಕಾಶ ಕಲ್ಪಿಸಲಾಗುತ್ತದೆ</p>.<p>* ಬಿಎಂಟಿಸಿ ಬಸ್ಗಳನ್ನು ನಿಲ್ಲಿಸಲು ತುಮಕೂರು–ಬೆಂಗಳೂರು ರಸ್ತೆಯ ನೈರುತ್ಯ ಮೂಲೆಯಲ್ಲಿ ಸ್ಥಳಾವಕಾಶ</p>.<p>* ಆಟೊ ನಿಲ್ದಾಣ ಸಾಮರ್ಥ್ಯ ವಿಸ್ತರಣೆ</p>.<p>* ಕಾರು, ಟ್ಯಾಕ್ಸಿ, ಆಟೊಗಳಿಗೆ ಪಿಕ್ ಅಪ್–ಡ್ರಾಪ್ ಸ್ಥಳಗಳು</p>.<p>* ಸೈಕಲ್ ಮತ್ತು ದ್ವಿಚಕ್ರ ಬಾಡಿಗೆ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ</p>.<p>* ನಿಲ್ದಾಣಗಳ ಮುಂದಿನ ಖಾಲಿ ಜಾಗದ ಸೌಂದರ್ಯೀಕರಣಕ್ಕೆ ಒತ್ತು</p>.<p><strong>ಹೈದರಾಬಾದ್ ಸಂಸ್ಥೆಗೆ ಗುತ್ತಿಗೆ</strong></p>.<p>ಪಾದಚಾರಿ ಮೇಲ್ಸೇತುವೆ ಮತ್ತು ವಾಹನ ನಿಲುಗಡೆ ಸೌಲಭ್ಯಗಳ ವಿನ್ಯಾಸದ ಗುತ್ತಿಗೆಯನ್ನು ಹೈದರಾಬಾದ್ನ ಆರ್ವಿ ಸಂಸ್ಥೆಗೆ ಬಿಎಂಆರ್ಸಿಎಲ್ ನೀಡಿದೆ. ನೈರುತ್ಯ ರೈಲ್ವೆಯು ಈಗಾಗಲೇ ಇತರೆ ಸೌಲಭ್ಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.</p>.<p><strong>ಸೋಪ್ ಫ್ಯಾಕ್ಟರಿಯಿಂದ–ಟಿಟಿಎಂಸಿಯವರೆಗೆ ಮೇಲ್ಸೇತುವೆ</strong></p>.<p>ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಿಂದ ಯಶವಂತಪುರದ ಬಿಎಂಟಿಸಿ ನಿಲ್ದಾಣದವರೆಗೆ 1,500 ಮೀಟರ್ ಉದ್ದದ ಪಾದಚಾರಿ ಮೇಲ್ಸೇತುವೆ ತಲೆ ಎತ್ತಲಿದೆ. ಇಲ್ಲಿಂದ, ಭಾರತೀಯ ವಿಜ್ಞಾನ ಸಂಸ್ಥೆಯವರೆಗೆ (ಐಐಎಸ್ಸಿ) ಸಂಪರ್ಕ ಕಲ್ಪಿಸುವ ಉದ್ದೇಶವಿದೆ. ಈ ಮೇಲ್ಸೇತುವೆಯ ವಿನ್ಯಾಸದ ಗುತ್ತಿಗೆಯನ್ನೂ ಆರ್ವೀ ಅಸೋಸಿಯೇಟ್ಸ್ಗೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>