‘ಕೊಲೆ, ಕೊಲೆಗೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಇಸ್ಲಾಂ ಖಾನ್, ಜೈಲಿಗೆ ಹೋಗಿ ಜಾಮೀನು ಮೇಲೆ ಹೊರ ಬಂದಿದ್ದ. ಉದ್ಯಮವೊಂದನ್ನು ನಡೆಸುತ್ತ ಪುನಃ ಅಪರಾಧ ಕೃತ್ಯ ಎಸಗುತ್ತಿದ್ದ. ಆರೋಪಿಗಳ ಪೈಕಿ ಒಬ್ಬಾತನ ಜೊತೆ ಇತ್ತೀಚೆಗೆ ಜಗಳ ಮಾಡಿದ್ದ ಇಸ್ಲಾಂ ಖಾನ್, ಎಚ್ಚರಿಕೆ ನೀಡಿದ್ದ. ಅದೇ ಸೇಡಿನಿಂದ ಆರೋಪಿಗಳು, ಸಂಚು ರೂಪಿಸಿ ಇಸ್ಲಾಂ ಖಾನ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದರು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.