ಬನಶಂಕರಿ 3ನೇ ಹಂತದ ಇಟ್ಟಮಡುವಿನಲ್ಲಿ ವಾಸವಿದ್ದ ವೃದ್ಧ ರಾಘವೇಂದ್ರ ಅವರನ್ನು 2014ರ ಡಿಸೆಂಬರ್ 17ರಂದು ಕೊಲೆ ಮಾಡಲಾಗಿತ್ತು. ಅವರ ಪತ್ನಿ ಸುಧಾಕುಮಾರಿ ಕೊಲೆಗೂ ಯತ್ನಿಸಲಾಗಿತ್ತು. ಪ್ರಕರಣದಲ್ಲಿ ರಾಮಾಂಜನೇಯಲುನನ್ನು ಬಂಧಿಸಿದ್ದ ಚನ್ನಮ್ಮನಕೆರೆ ಅಚ್ಚಕಟ್ಟು ಠಾಣೆಯ ಅಂದಿನ ಇನ್ಸ್ಪೆಕ್ಟರ್ ಬಿ.ಕೆ. ಶೇಖರ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.