ನಾಳೆ ‘ಉತ್ತರ್–ದಕ್ಷಿಣ್ ಸಂಗೀತ ಜುಗಲ್ಬಂದಿ’
ಬೆಂಗಳೂರು: ವಿವಿಧ್ ಆರ್ಟ್ಸ್ ಎಂಟರ್ಟೈನ್ಮೆಂಟ್ ಹಾಗೂ ದಿ ಪಯೊನೀರ್ ಆರ್ಟ್ಸ್ ಎಜುಕೇಷನ್ ಸೊಸೈಟಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ‘ಉತ್ತರ್ ದಕ್ಷಿಣ್’ ಶೀರ್ಷಿಕೆಯಡಿ ಸಂಗೀತ ಜುಗಲ್ಬಂದಿ ಸರಣಿಯನ್ನು ಮಾ.6ರಂದು ಸಂಜೆ 6 ಗಂಟೆಯಿಂದ ಚೌಡಯ್ಯ ಮೆಮೊರಿಯಲ್ ಹಾಲ್ನಲ್ಲಿ ಹಮ್ಮಿಕೊಂಡಿವೆ.
ಕಾರ್ಯಕ್ರಮದಲ್ಲಿ ಕೊಳಲು ವಾದಕ ಪಂಡಿತ್ ರೋನು ಮುಜುಂದಾರ್ ಮತ್ತು ಮ್ಯಾಂಡೋಲಿನ್ ವಾದಕ ಯು.ರಾಜೇಶ್ ಅವರ ಜುಗಲ್ಬಂದಿ, ಬೆಂಗಳೂರು ವಿ.ಪ್ರವೀಣ್ ಮತ್ತು ವಿ.ನರಹರಿ, ಭಟ್ ಸಹೋದರಿಯರಾದ ರಮ್ಯಾ ಮತ್ತು ರೇಷ್ಮಾ ಅವರಿಂದ ಹಿಂದೂಸ್ತಾನಿ ಗಾಯನ ಇರಲಿದೆ.
‘ಬುಕ್ ಮೈ ಶೋನಲ್ಲಿ ಕಾರ್ಯಕ್ರಮದ ಟಿಕೆಟ್ಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ 9845989228 ಸಂಖ್ಯೆಯನ್ನು ಸಂಪರ್ಕಿಸಬಹುದು’ ಎಂದು ಪ್ರಕಟಣೆ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.