<p>ಬೆಂಗಳೂರು: ‘ಸನಾತನ ಹಿಂದೂ ಧರ್ಮವು ಮೌಲಿಕ ತತ್ವಗಳ ಆಗರವಾಗಿದೆ. ಈ ಧರ್ಮದ ಮೇಲೆ ನಿರಂತರ ಸಾಂಸ್ಕೃತಿಕ ಆಕ್ರಮಣ ನಡೆಯುತ್ತಿದೆ’ ಎಂದು ಸಾಂಸ್ಕೃತಿಕ ಚಿಂತಕ ಕೊನ್ರಾಡ್ ಎಲ್ಸ್ಟ್ ಬೇಸರ ವ್ಯಕ್ತಪಡಿಸಿದರು.</p>.<p>ದಿ ಮಿಥಿಕ್ ಸೊಸೈಟಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಪ್ರೊ.ಎಂ.ವಿ. ಕೃಷ್ಣರಾವ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ‘ಹಿಂದೂ ಧರ್ಮ ಮತ್ತು ಸಾಂಸ್ಕೃತಿಕ ಯುದ್ಧಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು. </p>.<p>‘ನೈತಿಕ ಮೌಲ್ಯಗಳು ಸದಾಕಾಲ ಧರ್ಮದ ಅಡಿಪಾಯವಾಗಿರಬೇಕು. ಹಿಂದೂ ಧರ್ಮದ ಮೇಲೆ ಅನೇಕ ಶತಮಾನಗಳಿಂದ ಸಾಂಸ್ಕೃತಿಕ ಮತ್ತು ಬೌದ್ಧಿಕ ದಾಳಿಗಳು ನಡೆಯುತ್ತಿವೆ. ಈ ದಾಳಿಗಳನ್ನು ಸಮರ್ಥವಾಗಿ ಹಿಂದೂ ಧರ್ಮ ಎದುರಿಸಿದೆ. ಭಾರತೀಯ ಸಮಾಜದಲ್ಲಿ ಕಾಲ ಕಾಲಕ್ಕೆ ಪ್ರಚಲಿತವಿರುವ ಆಚರಣೆಗಳು ಆಯಾ ಕಾಲಘಟ್ಟಕ್ಕೆ ಪ್ರಸ್ತುತವಾಗಿದ್ದರೂ, ಅವುಗಳನ್ನು ಪ್ರಶ್ನಿಸುವ ಅಧಿಕಾರವನ್ನು ಭಾರತೀಯ ಸಮಾಜ ಮತ್ತು ಹಿಂದೂ ಧರ್ಮ ಜಗತ್ತಿಗೆ ನೀಡಿವೆ’ ಎಂದು ಹೇಳಿದರು.</p>.<p>‘ಸಮಕಾಲೀನ ಜಗತ್ತಿನಲ್ಲಿರುವ ಅನೇಕ ಧರ್ಮಗಳು ಈ ಪ್ರಶ್ನಿಸುವ ಅಧಿಕಾರವನ್ನು ಜನರಿಗೆ ನೀಡಿಲ್ಲ. ಈ ಕಾರಣ ಆ ಧರ್ಮಗಳಲ್ಲಿ ಹೆಚ್ಚು ಜಟಿಲತೆ ಕಂಡುಬರುತ್ತಿದೆ. ಈ ಮೂಲಕ ಅವುಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಸಹ ಕ್ರಮೇಣ ನಾಶವಾಗುತ್ತಿವೆ. ಇದು ಕಳವಳಕಾರಿ ಬೆಳವಣಿಗೆ ಆಗಿದೆ. ಆದ್ದರಿಂದ, ಇಂದಿನ ಕಾಲದಲ್ಲಿ ನಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಮರುವ್ಯಾಖ್ಯಾನಿಸುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.</p>.<p>ಇತಿಹಾಸಕಾರ ಜಿ.ಬಿ. ಹರೀಶ್ ಅವರ ‘ಬೌದ್ಧಿಕ ಕ್ಷತ್ರಿಯರು’ ಪುಸ್ತಕವನ್ನು ದಿ ಮಿಥಿಕ್ ಸೊಸೈಟಿಯ ಉಪಾಧ್ಯಕ್ಷ ಪ್ರೊ. ಎಂ.ಕೊಟ್ರೇಶ್ ಲೋಕಾರ್ಪಣೆ ಮಾಡಿದರು. ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಪಿ.ಎಂ. ಗಿರಿಧರ್ ಉಪಾಧ್ಯಾಯ, ಎಸ್. ರವಿ, ಎಂ.ಆರ್. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಸನಾತನ ಹಿಂದೂ ಧರ್ಮವು ಮೌಲಿಕ ತತ್ವಗಳ ಆಗರವಾಗಿದೆ. ಈ ಧರ್ಮದ ಮೇಲೆ ನಿರಂತರ ಸಾಂಸ್ಕೃತಿಕ ಆಕ್ರಮಣ ನಡೆಯುತ್ತಿದೆ’ ಎಂದು ಸಾಂಸ್ಕೃತಿಕ ಚಿಂತಕ ಕೊನ್ರಾಡ್ ಎಲ್ಸ್ಟ್ ಬೇಸರ ವ್ಯಕ್ತಪಡಿಸಿದರು.</p>.<p>ದಿ ಮಿಥಿಕ್ ಸೊಸೈಟಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಪ್ರೊ.ಎಂ.ವಿ. ಕೃಷ್ಣರಾವ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ‘ಹಿಂದೂ ಧರ್ಮ ಮತ್ತು ಸಾಂಸ್ಕೃತಿಕ ಯುದ್ಧಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು. </p>.<p>‘ನೈತಿಕ ಮೌಲ್ಯಗಳು ಸದಾಕಾಲ ಧರ್ಮದ ಅಡಿಪಾಯವಾಗಿರಬೇಕು. ಹಿಂದೂ ಧರ್ಮದ ಮೇಲೆ ಅನೇಕ ಶತಮಾನಗಳಿಂದ ಸಾಂಸ್ಕೃತಿಕ ಮತ್ತು ಬೌದ್ಧಿಕ ದಾಳಿಗಳು ನಡೆಯುತ್ತಿವೆ. ಈ ದಾಳಿಗಳನ್ನು ಸಮರ್ಥವಾಗಿ ಹಿಂದೂ ಧರ್ಮ ಎದುರಿಸಿದೆ. ಭಾರತೀಯ ಸಮಾಜದಲ್ಲಿ ಕಾಲ ಕಾಲಕ್ಕೆ ಪ್ರಚಲಿತವಿರುವ ಆಚರಣೆಗಳು ಆಯಾ ಕಾಲಘಟ್ಟಕ್ಕೆ ಪ್ರಸ್ತುತವಾಗಿದ್ದರೂ, ಅವುಗಳನ್ನು ಪ್ರಶ್ನಿಸುವ ಅಧಿಕಾರವನ್ನು ಭಾರತೀಯ ಸಮಾಜ ಮತ್ತು ಹಿಂದೂ ಧರ್ಮ ಜಗತ್ತಿಗೆ ನೀಡಿವೆ’ ಎಂದು ಹೇಳಿದರು.</p>.<p>‘ಸಮಕಾಲೀನ ಜಗತ್ತಿನಲ್ಲಿರುವ ಅನೇಕ ಧರ್ಮಗಳು ಈ ಪ್ರಶ್ನಿಸುವ ಅಧಿಕಾರವನ್ನು ಜನರಿಗೆ ನೀಡಿಲ್ಲ. ಈ ಕಾರಣ ಆ ಧರ್ಮಗಳಲ್ಲಿ ಹೆಚ್ಚು ಜಟಿಲತೆ ಕಂಡುಬರುತ್ತಿದೆ. ಈ ಮೂಲಕ ಅವುಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಸಹ ಕ್ರಮೇಣ ನಾಶವಾಗುತ್ತಿವೆ. ಇದು ಕಳವಳಕಾರಿ ಬೆಳವಣಿಗೆ ಆಗಿದೆ. ಆದ್ದರಿಂದ, ಇಂದಿನ ಕಾಲದಲ್ಲಿ ನಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಮರುವ್ಯಾಖ್ಯಾನಿಸುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.</p>.<p>ಇತಿಹಾಸಕಾರ ಜಿ.ಬಿ. ಹರೀಶ್ ಅವರ ‘ಬೌದ್ಧಿಕ ಕ್ಷತ್ರಿಯರು’ ಪುಸ್ತಕವನ್ನು ದಿ ಮಿಥಿಕ್ ಸೊಸೈಟಿಯ ಉಪಾಧ್ಯಕ್ಷ ಪ್ರೊ. ಎಂ.ಕೊಟ್ರೇಶ್ ಲೋಕಾರ್ಪಣೆ ಮಾಡಿದರು. ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಪಿ.ಎಂ. ಗಿರಿಧರ್ ಉಪಾಧ್ಯಾಯ, ಎಸ್. ರವಿ, ಎಂ.ಆರ್. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>