ಬೆಂಗಳೂರು:‘ನಗರದ ಮೆಟ್ರೊ ನಿಲ್ದಾಣವೊಂದಕ್ಕೆ ಬಸವಣ್ಣನವರ ಹೆಸರಿಡಬೇಕು’ ಎಂದು ಮಹಾಲಕ್ಷ್ಮೀ ಬಡಾವಣೆಯ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಅವಿನ್ ಆರಾಧ್ಯ ಮನವಿ ಮಾಡಿದ್ದಾರೆ.
‘ವಿಧಾನಸೌಧದ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ. ಇದರಿಂದ ಸಮಸ್ತವೀರಶೈವ ಲಿಂಗಾಯತ ಸಮುದಾಯಕ್ಕೆ ಸಂತಸವಾಗಿದೆ’ ಎಂದೂ ಹೇಳಿದ್ದಾರೆ.