<p><strong>ಬೆಂಗಳೂರು:</strong> ಕೆ.ಆರ್.ಪುರ ವೈಟ್ಫೀಲ್ಡ್ ನಡುವಿನ ಮೆಟ್ರೊ ರೈಲು ಮಾರ್ಗದ ಪರಿಶೀಲನೆಗೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರನ್ನು ಫೆಬ್ರುವರಿಯಲ್ಲಿ ಆಹ್ವಾನಿಸಲು ಬಿಎಂಆರ್ಸಿಎಲ್ ಸಜ್ಜಾಗಿದ್ದು, ಈ ಮಾರ್ಗಕ್ಕೆ ಮತ್ತೊಂದು ಹೊಸ ರೈಲನ್ನು ಸ್ಥಳಾಂತರಿಸಿದೆ.</p>.<p>ಆರು ಬೋಗಿಗಳನ್ನು ದೊಡ್ಡ ಟ್ರಕ್ಗಳಲ್ಲಿ ತರಲಾಗಿದ್ದು, ಶುಕ್ರವಾರ ಸಂಜೆ ವೈಟ್ಫೀಲ್ಡ್ ಡಿಪೊಗೆ ಬಂದಿವೆ. ಸದ್ಯ ಒಂದು ರೈಲು ಅಕ್ಟೋಬರ್ 21ರಿಂದಲೇ ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ.</p>.<p>ಬೈಯಪ್ಪನಹಳ್ಳಿ–ವೈಟ್ಫೀಲ್ಡ್ ಮಾರ್ಗದಲ್ಲಿ ಮೊದಲ ಹಂತದಲ್ಲಿ ಕೆ.ಆರ್.ಪುರ–ವೈಟ್ಫೀಲ್ಡ್ ನಡುವೆ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. ಫೆಬ್ರುವರಿ 15ರಿಂದ 20ರ ನಡುವೆ ರೈಲು ಸುರಕ್ಷತಾ ಆಯುಕ್ತರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.</p>.<p>ಪರಿಶೀಲನೆ ನಡೆಸಿ ಸುರಕ್ಷತೆ ಬಗ್ಗೆ ಹಸಿರು ನಿಶಾನೆ ದೊರೆತರೆ ಕೆಲವೇ ದಿನಗಳಲ್ಲಿ ವೈಟ್ಫೀಲ್ಡ್–ಕೆ.ಆರ್.ಪುರ ನಡುವೆ ಮೆಟ್ರೊ ರೈಲು ಸಂಚರಿಸಲಿದೆ. ಈ ಮಾರ್ಗವನ್ನು ಬೈಯಪ್ಪನಹಳ್ಳಿ ತನಕ ಜೋಡಿಸಲು ಬೆನ್ನಿಗಾನಹಳ್ಳಿ ಬಳಿ ವೆಬ್ ಗರ್ಡರ್ ಅಳವಡಿಕೆ ಕಾಮಗಾರಿ ಸವಾಲಾಗಿದ್ದು, ಈ ಕಾಮಗಾರಿಯೂ ಈಗ ಪ್ರಗತಿಯಲ್ಲಿದೆ. ಜೂನ್ ವೇಳೆಗೆ ಈ ಮಾರ್ಗದಲ್ಲೂ ರೈಲು ಕಾರ್ಯಾಚರಣೆ ಮಾಡಲು ಬಿಎಂಆರ್ಸಿಎಲ್ ಉದ್ದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೆ.ಆರ್.ಪುರ ವೈಟ್ಫೀಲ್ಡ್ ನಡುವಿನ ಮೆಟ್ರೊ ರೈಲು ಮಾರ್ಗದ ಪರಿಶೀಲನೆಗೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರನ್ನು ಫೆಬ್ರುವರಿಯಲ್ಲಿ ಆಹ್ವಾನಿಸಲು ಬಿಎಂಆರ್ಸಿಎಲ್ ಸಜ್ಜಾಗಿದ್ದು, ಈ ಮಾರ್ಗಕ್ಕೆ ಮತ್ತೊಂದು ಹೊಸ ರೈಲನ್ನು ಸ್ಥಳಾಂತರಿಸಿದೆ.</p>.<p>ಆರು ಬೋಗಿಗಳನ್ನು ದೊಡ್ಡ ಟ್ರಕ್ಗಳಲ್ಲಿ ತರಲಾಗಿದ್ದು, ಶುಕ್ರವಾರ ಸಂಜೆ ವೈಟ್ಫೀಲ್ಡ್ ಡಿಪೊಗೆ ಬಂದಿವೆ. ಸದ್ಯ ಒಂದು ರೈಲು ಅಕ್ಟೋಬರ್ 21ರಿಂದಲೇ ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ.</p>.<p>ಬೈಯಪ್ಪನಹಳ್ಳಿ–ವೈಟ್ಫೀಲ್ಡ್ ಮಾರ್ಗದಲ್ಲಿ ಮೊದಲ ಹಂತದಲ್ಲಿ ಕೆ.ಆರ್.ಪುರ–ವೈಟ್ಫೀಲ್ಡ್ ನಡುವೆ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. ಫೆಬ್ರುವರಿ 15ರಿಂದ 20ರ ನಡುವೆ ರೈಲು ಸುರಕ್ಷತಾ ಆಯುಕ್ತರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.</p>.<p>ಪರಿಶೀಲನೆ ನಡೆಸಿ ಸುರಕ್ಷತೆ ಬಗ್ಗೆ ಹಸಿರು ನಿಶಾನೆ ದೊರೆತರೆ ಕೆಲವೇ ದಿನಗಳಲ್ಲಿ ವೈಟ್ಫೀಲ್ಡ್–ಕೆ.ಆರ್.ಪುರ ನಡುವೆ ಮೆಟ್ರೊ ರೈಲು ಸಂಚರಿಸಲಿದೆ. ಈ ಮಾರ್ಗವನ್ನು ಬೈಯಪ್ಪನಹಳ್ಳಿ ತನಕ ಜೋಡಿಸಲು ಬೆನ್ನಿಗಾನಹಳ್ಳಿ ಬಳಿ ವೆಬ್ ಗರ್ಡರ್ ಅಳವಡಿಕೆ ಕಾಮಗಾರಿ ಸವಾಲಾಗಿದ್ದು, ಈ ಕಾಮಗಾರಿಯೂ ಈಗ ಪ್ರಗತಿಯಲ್ಲಿದೆ. ಜೂನ್ ವೇಳೆಗೆ ಈ ಮಾರ್ಗದಲ್ಲೂ ರೈಲು ಕಾರ್ಯಾಚರಣೆ ಮಾಡಲು ಬಿಎಂಆರ್ಸಿಎಲ್ ಉದ್ದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>