<p><strong>ಬೆಂಗಳೂರು: </strong>‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕಾಮಗಾರಿಗಾಗಿ ಮರಗಳ ತೆರವು ಪ್ರಕ್ರಿಯೆ ವಿಳಂಬವಾಗಿರುವುದರಿಂದ, ಕಾಮರಾಜ ರಸ್ತೆ ಮೆಟ್ರೊ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಈ ಕುರಿತ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಗುತ್ತಿಗೆ ಪಡೆದ ಕಂಪನಿಗೆ ಇನ್ನೂ ಭೂಮಿ ಹಸ್ತಾಂತರ ಮಾಡಿಲ್ಲ.</p>.<p>ಎರಡನೇ ಹಂತದಲ್ಲಿ ಒಟ್ಟು 265 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಹೇಳಿದೆ. ಈ ಪೈಕಿ, ಉದ್ದೇಶಿತ ಕಾಮರಾಜ್ ಮೆಟ್ರೊ ನಿಲ್ದಾಣ ಜಾಗದ ಸುತ್ತ–ಮುತ್ತ 73 ಮರಗಳನ್ನು ಕಡಿಯಬೇಕಾಗಿದೆ ಮತ್ತು 9 ಮರಗಳನ್ನು ಸ್ಥಳಾಂತರಿಸಬೇಕಾಗಿದೆ.</p>.<p>ಕಾಮಗಾರಿಗಾಗಿ ಮರಗಳನ್ನು ಕಡಿಯುವುದು ತೀರಾ ಅಗತ್ಯವಿದೆಯೇ, ಸ್ಥಳೀಯವಾಗಿ ಆಕ್ಷೇಪ ಇದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಹೈಕೋರ್ಟ್ ತಜ್ಞರ ಸಮಿತಿ ರಚಿಸಿದೆ. ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ ನೇತೃತ್ವ ವಹಿಸಿದ್ದು, ಅಂತಿಮವಾಗಿ ಎಷ್ಟು ಮರಗಳನ್ನು ತೆರವುಗೊಳಿಸಬಹುದು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.</p>.<p class="Subhead">ಹಸ್ತಾಂತರವಾಗದ ಭೂಮಿ: ಕಾಮರಾಜ ರಸ್ತೆ ನೆಲದಡಿ ನಿಲ್ದಾಣವಲ್ಲದೆ, ಗೊಟ್ಟಿಗೆರೆ-ನಾಗವಾರ ಸುರಂಗ ಮಾರ್ಗದ ಪೈಕಿ ವೆಲ್ಲಾರ ಜಂಕ್ಷನ್- ಶಿವಾಜಿನಗರ ಮತ್ತು ಶಿವಾಜಿನಗರ-ಪಾಟರಿ ಟೌನ್ ನಡುವೆ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಮಾರ್ಚ್ನಲ್ಲೇ ಎಲ್ ಆ್ಯಂಡ್ ಟಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಈವರೆಗೆ ಸಂಪೂರ್ಣವಾಗಿ ಈ ಭೂಮಿಯನ್ನು ನಿಗಮವು ಕಂಪನಿಗೆ ಹಸ್ತಾಂತರ ಮಾಡಲು ಸಾಧ್ಯವಾಗಿಲ್ಲ. ಮರಗಳ ತೆರವು ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಇದಕ್ಕೆ ಕಾರಣ.</p>.<p>ನಿಯಮದ ಪ್ರಕಾರ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ 90 ದಿನಗಳಲ್ಲಿ ಭೂಮಿಯನ್ನು ಹಸ್ತಾಂತರಿಸಬೇಕಿತ್ತು. ಆದರೆ, 11 ತಿಂಗಳು ಕಳೆದರೂ ಈ ಕಾರ್ಯ ಪೂರ್ಣಗೊಂಡಿಲ್ಲ.</p>.<p class="Subhead"><strong>ವಿಳಂಬವಾದಷ್ಟೂ ನಷ್ಟ:</strong> ತಜ್ಞರ ಅಂದಾಜಿನ ಪ್ರಕಾರ, ಒಂದು ದಿನಕ್ಕೆ ಒಂದು ಚದರ ಮೀಟರ್ನಷ್ಟು ಜಾಗದಲ್ಲಿ ಕಾಮಗಾರಿ ನಡೆಸಲು ₹100 ವೆಚ್ಚವಾಗುತ್ತದೆ. ಒಂದೊಂದು ನಿಲ್ದಾಣದ ವಿಸ್ತೀರ್ಣ ಸಾವಿರಾರು ಚದರ ಮೀಟರ್ ಇರುವುದರಿಂದ, ಎಂಟು ತಿಂಗಳು ವಿಳಂಬ ಎಂದು ಲೆಕ್ಕ ಹಾಕಿದರೆ ಕೋಟ್ಯಂತರ ರೂಪಾಯಿ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.</p>.<p>ಈ ಮಾರ್ಗದಲ್ಲಿ ಒಟ್ಟು 18 ಮೆಟ್ರೊ ನಿಲ್ದಾಣಗಳು ನಿರ್ಮಾಣಗೊಳ್ಳಬೇಕಿದ್ದು, ಮರಗಳ ತೆರವು ಕಾರ್ಯ ವಿಳಂಬದಿಂದ ಅವುಗಳ ಕಾಮಗಾರಿಯೂ ನಿಧಾನವಾಗಿ ಸಾಗಿದೆ.</p>.<p>***</p>.<p>ಮರಗಳ ತೆರವು ಪ್ರಕ್ರಿಯೆ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶದ ನಂತರವೇ ನಾವು ಮುಂದುವರಿಯಬೇಕಿದೆ. ಹೀಗಾಗಿ, ಕಾಮಗಾರಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದೆ</p>.<p><strong>-ಯಶವಂತ ಚೌಹಾಣ್,ಬಿಎಂಆರ್ಸಿಎಲ್ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ</strong></p>.<p>ಆಕ್ಷೇಪಣೆಗಳ ಆಲಿಕೆ, ಪರಿಶೀಲನೆ ಮುಕ್ತಾಯವಾಗಿದ್ದು, ಸಮಿತಿಯ ಶಿಫಾರಸುಗಳನ್ನು ಹೈಕೋರ್ಟ್ಗೆ ಸಲ್ಲಿಸಲಾಗುತ್ತದೆ. ನ್ಯಾಯಾಲಯವು ಮಂಗಳವಾರ (ಫೆ.10) ವಿಚಾರಣೆ ನಡೆಸಲಿದೆ.</p>.<p><strong>-ಎಂ.ಕೆ. ಚೋಳರಾಜಪ್ಪ, ತಜ್ಞರ ಸಮಿತಿ ಅಧ್ಯಕ್ಷ</strong></p>.<p><strong>ಅಂಕಿ ಅಂಶ</strong></p>.<p>21.25 ಕಿ.ಮೀ. -ಗೊಟ್ಟಿಗೆರೆ–ನಾಗವಾರ ಮಾರ್ಗದ ಒಟ್ಟು ಉದ್ದ</p>.<p>13.79 ಕಿ.ಮೀ. -ಡೈರಿ ಸರ್ಕಲ್ನಿಂದ ನಾಗವಾರದವರೆಗಿನ ಸುರಂಗ ಮಾರ್ಗದ ಉದ್ದ</p>.<p>₹11,500 ಕೋಟಿ -ಗೊಟ್ಟಿಗೆರೆಯಿಂದ ನಾಗವಾರ ಮಾರ್ಗ ನಿರ್ಮಾಣ ವೆಚ್ಚ (ಎಲಿವೇಟೆಡ್ ಸಹಿತ)</p>.<p>12 -ನೆಲದಡಿ ನಿಲ್ದಾಣಗಳು</p>.<p>6 -ಎತ್ತರಿಸಿದ ನಿಲ್ದಾಣಗಳು</p>.<p>300 -ನೆಲದಡಿ ನಿಲ್ದಾಣಗಳ ನಿರ್ಮಾಣಕ್ಕಾಗಿ ಬಿಎಂಆರ್ಸಿಎಲ್ ಸ್ವಾಧೀನಪಡಿಸಿಕೊಂಡಿರುವ ಆಸ್ತಿ ಅಥವಾ ಕಟ್ಟಡಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕಾಮಗಾರಿಗಾಗಿ ಮರಗಳ ತೆರವು ಪ್ರಕ್ರಿಯೆ ವಿಳಂಬವಾಗಿರುವುದರಿಂದ, ಕಾಮರಾಜ ರಸ್ತೆ ಮೆಟ್ರೊ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಈ ಕುರಿತ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಗುತ್ತಿಗೆ ಪಡೆದ ಕಂಪನಿಗೆ ಇನ್ನೂ ಭೂಮಿ ಹಸ್ತಾಂತರ ಮಾಡಿಲ್ಲ.</p>.<p>ಎರಡನೇ ಹಂತದಲ್ಲಿ ಒಟ್ಟು 265 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಹೇಳಿದೆ. ಈ ಪೈಕಿ, ಉದ್ದೇಶಿತ ಕಾಮರಾಜ್ ಮೆಟ್ರೊ ನಿಲ್ದಾಣ ಜಾಗದ ಸುತ್ತ–ಮುತ್ತ 73 ಮರಗಳನ್ನು ಕಡಿಯಬೇಕಾಗಿದೆ ಮತ್ತು 9 ಮರಗಳನ್ನು ಸ್ಥಳಾಂತರಿಸಬೇಕಾಗಿದೆ.</p>.<p>ಕಾಮಗಾರಿಗಾಗಿ ಮರಗಳನ್ನು ಕಡಿಯುವುದು ತೀರಾ ಅಗತ್ಯವಿದೆಯೇ, ಸ್ಥಳೀಯವಾಗಿ ಆಕ್ಷೇಪ ಇದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಹೈಕೋರ್ಟ್ ತಜ್ಞರ ಸಮಿತಿ ರಚಿಸಿದೆ. ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ ನೇತೃತ್ವ ವಹಿಸಿದ್ದು, ಅಂತಿಮವಾಗಿ ಎಷ್ಟು ಮರಗಳನ್ನು ತೆರವುಗೊಳಿಸಬಹುದು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.</p>.<p class="Subhead">ಹಸ್ತಾಂತರವಾಗದ ಭೂಮಿ: ಕಾಮರಾಜ ರಸ್ತೆ ನೆಲದಡಿ ನಿಲ್ದಾಣವಲ್ಲದೆ, ಗೊಟ್ಟಿಗೆರೆ-ನಾಗವಾರ ಸುರಂಗ ಮಾರ್ಗದ ಪೈಕಿ ವೆಲ್ಲಾರ ಜಂಕ್ಷನ್- ಶಿವಾಜಿನಗರ ಮತ್ತು ಶಿವಾಜಿನಗರ-ಪಾಟರಿ ಟೌನ್ ನಡುವೆ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಮಾರ್ಚ್ನಲ್ಲೇ ಎಲ್ ಆ್ಯಂಡ್ ಟಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಈವರೆಗೆ ಸಂಪೂರ್ಣವಾಗಿ ಈ ಭೂಮಿಯನ್ನು ನಿಗಮವು ಕಂಪನಿಗೆ ಹಸ್ತಾಂತರ ಮಾಡಲು ಸಾಧ್ಯವಾಗಿಲ್ಲ. ಮರಗಳ ತೆರವು ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಇದಕ್ಕೆ ಕಾರಣ.</p>.<p>ನಿಯಮದ ಪ್ರಕಾರ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ 90 ದಿನಗಳಲ್ಲಿ ಭೂಮಿಯನ್ನು ಹಸ್ತಾಂತರಿಸಬೇಕಿತ್ತು. ಆದರೆ, 11 ತಿಂಗಳು ಕಳೆದರೂ ಈ ಕಾರ್ಯ ಪೂರ್ಣಗೊಂಡಿಲ್ಲ.</p>.<p class="Subhead"><strong>ವಿಳಂಬವಾದಷ್ಟೂ ನಷ್ಟ:</strong> ತಜ್ಞರ ಅಂದಾಜಿನ ಪ್ರಕಾರ, ಒಂದು ದಿನಕ್ಕೆ ಒಂದು ಚದರ ಮೀಟರ್ನಷ್ಟು ಜಾಗದಲ್ಲಿ ಕಾಮಗಾರಿ ನಡೆಸಲು ₹100 ವೆಚ್ಚವಾಗುತ್ತದೆ. ಒಂದೊಂದು ನಿಲ್ದಾಣದ ವಿಸ್ತೀರ್ಣ ಸಾವಿರಾರು ಚದರ ಮೀಟರ್ ಇರುವುದರಿಂದ, ಎಂಟು ತಿಂಗಳು ವಿಳಂಬ ಎಂದು ಲೆಕ್ಕ ಹಾಕಿದರೆ ಕೋಟ್ಯಂತರ ರೂಪಾಯಿ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.</p>.<p>ಈ ಮಾರ್ಗದಲ್ಲಿ ಒಟ್ಟು 18 ಮೆಟ್ರೊ ನಿಲ್ದಾಣಗಳು ನಿರ್ಮಾಣಗೊಳ್ಳಬೇಕಿದ್ದು, ಮರಗಳ ತೆರವು ಕಾರ್ಯ ವಿಳಂಬದಿಂದ ಅವುಗಳ ಕಾಮಗಾರಿಯೂ ನಿಧಾನವಾಗಿ ಸಾಗಿದೆ.</p>.<p>***</p>.<p>ಮರಗಳ ತೆರವು ಪ್ರಕ್ರಿಯೆ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶದ ನಂತರವೇ ನಾವು ಮುಂದುವರಿಯಬೇಕಿದೆ. ಹೀಗಾಗಿ, ಕಾಮಗಾರಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದೆ</p>.<p><strong>-ಯಶವಂತ ಚೌಹಾಣ್,ಬಿಎಂಆರ್ಸಿಎಲ್ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ</strong></p>.<p>ಆಕ್ಷೇಪಣೆಗಳ ಆಲಿಕೆ, ಪರಿಶೀಲನೆ ಮುಕ್ತಾಯವಾಗಿದ್ದು, ಸಮಿತಿಯ ಶಿಫಾರಸುಗಳನ್ನು ಹೈಕೋರ್ಟ್ಗೆ ಸಲ್ಲಿಸಲಾಗುತ್ತದೆ. ನ್ಯಾಯಾಲಯವು ಮಂಗಳವಾರ (ಫೆ.10) ವಿಚಾರಣೆ ನಡೆಸಲಿದೆ.</p>.<p><strong>-ಎಂ.ಕೆ. ಚೋಳರಾಜಪ್ಪ, ತಜ್ಞರ ಸಮಿತಿ ಅಧ್ಯಕ್ಷ</strong></p>.<p><strong>ಅಂಕಿ ಅಂಶ</strong></p>.<p>21.25 ಕಿ.ಮೀ. -ಗೊಟ್ಟಿಗೆರೆ–ನಾಗವಾರ ಮಾರ್ಗದ ಒಟ್ಟು ಉದ್ದ</p>.<p>13.79 ಕಿ.ಮೀ. -ಡೈರಿ ಸರ್ಕಲ್ನಿಂದ ನಾಗವಾರದವರೆಗಿನ ಸುರಂಗ ಮಾರ್ಗದ ಉದ್ದ</p>.<p>₹11,500 ಕೋಟಿ -ಗೊಟ್ಟಿಗೆರೆಯಿಂದ ನಾಗವಾರ ಮಾರ್ಗ ನಿರ್ಮಾಣ ವೆಚ್ಚ (ಎಲಿವೇಟೆಡ್ ಸಹಿತ)</p>.<p>12 -ನೆಲದಡಿ ನಿಲ್ದಾಣಗಳು</p>.<p>6 -ಎತ್ತರಿಸಿದ ನಿಲ್ದಾಣಗಳು</p>.<p>300 -ನೆಲದಡಿ ನಿಲ್ದಾಣಗಳ ನಿರ್ಮಾಣಕ್ಕಾಗಿ ಬಿಎಂಆರ್ಸಿಎಲ್ ಸ್ವಾಧೀನಪಡಿಸಿಕೊಂಡಿರುವ ಆಸ್ತಿ ಅಥವಾ ಕಟ್ಟಡಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>