<p><strong>ಬೆಂಗಳೂರು:</strong> ‘ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಧರ್ಮ, ಜಾತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು, ನೈಜ ಸಮಸ್ಯೆಗಳನ್ನು ಮರೆಮಾಚುವ ಕೆಲಸ ಮಾಡುತ್ತಿವೆ’ ಎಂದು ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಬೇಸರ ವ್ಯಕ್ತಪಡಿಸಿದರು.</p>.<p>ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಮತ್ತು ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಜಂಟಿಯಾಗಿ ನಗರದಲ್ಲಿ ಈಚೆಗೆ ಆಯೋಜಿಸಿದ್ದ ‘ಕನ್ನಡ ಪ್ರಗತಿಶೀಲ ಘಟ್ಟ ಮತ್ತು<br />ಬಸವರಾಜ ಕಟ್ಟೀಮನಿ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‘ರಾಜಕೀಯ ಪಕ್ಷಗಳು ಜನರನ್ನು ಮರುಳು ಮಾಡಿ, ಆರ್ಥಿಕ ಸಮಸ್ಯೆಗಳನ್ನು ಪಕ್ಕಕ್ಕೆ ತಳ್ಳುತ್ತಿವೆ’ ಎಂದರು.</p>.<p>‘ಪ್ರಗತಿಶೀಲತೆ ಎಲ್ಲ ಕಾಲದ ಗುಣ ಆಗಿರಬೇಕು. ಆದರೆ, ಈಚಿನ 20 ವರ್ಷಗಳಲ್ಲಿ ಪ್ರಗತಿಶೀಲತೆ ಇಲ್ಲವಾಗಿದೆ. ಕಟ್ಟೀಮನಿ ಅವರು ಕಾದಂಬರಿ ಬರೆದಾಗ ಅನಕ್ಷರತೆಯಿಂದಾಗಿ ಕೆಲವರಿಗೆ ಅದನ್ನು ಓದಲು ಸಾಧ್ಯವಾಗಲಿಲ್ಲ.ಅಕ್ಷರಸ್ಥರು ಓದಲು ಪ್ರಾರಂಭಿಸಿದಾಗ ಕೃತಿಗಳು ದೊರೆಯದಂತೆ ಪಿತೂರಿ ಮಾಡಲಾಯಿತು’ ಎಂದರು.</p>.<p>ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಪ್ರಗತಿಶೀಲ ಕಾಲಘಟ್ಟ ಈ ಸಮಾಜದ ಮೇಲೆ ಮಹತ್ವದ ಪರಿಣಾಮ ಬೀರಿದೆ. ಈ ಕಾಲಘಟ್ಟ ಮೌನಕ್ಕೆ ಮಾತು ಕೊಟ್ಟಿತು. ಸ್ವಾತಂತ್ರ್ಯೋತ್ತರ ಬೆಳವಣಿಗೆ ಹಾಗೂ ಸ್ವಾತಂತ್ರ್ಯ ಪೂರ್ವದ ಆಶಯಗಳು ಇದಕ್ಕೆ ಪ್ರಮುಖ ಕಾರಣ. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಕೃತಿಗಳ ಪುಸ್ತಕ ಮಾಲೆಯನ್ನು ಸರ್ಕಾರ ಹೊರತರಬೇಕು. ಯುವಪೀಳಿಗೆ ಅದನ್ನು ಓದುವಂತಾಗಬೇಕು’ ಎಂದರು.</p>.<p>ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಕಾರ್ಯದರ್ಶಿಪ್ರೊ.ಎಸ್.ಎನ್. ನಾಗರಾಜರೆಡ್ಡಿ, ‘ಇವತ್ತಿನ ಕಾಲಘಟ್ಟದಲ್ಲಿ ಪ್ರಗತಿಶೀಲ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕಿದೆ. ಈಗಿನ ಸನ್ನಿವೇಶ ನೋಡಿದರೆ ಸಮಾಜ ವಿನಾಶದತ್ತಸಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಧರ್ಮ, ಜಾತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು, ನೈಜ ಸಮಸ್ಯೆಗಳನ್ನು ಮರೆಮಾಚುವ ಕೆಲಸ ಮಾಡುತ್ತಿವೆ’ ಎಂದು ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಬೇಸರ ವ್ಯಕ್ತಪಡಿಸಿದರು.</p>.<p>ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಮತ್ತು ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಜಂಟಿಯಾಗಿ ನಗರದಲ್ಲಿ ಈಚೆಗೆ ಆಯೋಜಿಸಿದ್ದ ‘ಕನ್ನಡ ಪ್ರಗತಿಶೀಲ ಘಟ್ಟ ಮತ್ತು<br />ಬಸವರಾಜ ಕಟ್ಟೀಮನಿ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‘ರಾಜಕೀಯ ಪಕ್ಷಗಳು ಜನರನ್ನು ಮರುಳು ಮಾಡಿ, ಆರ್ಥಿಕ ಸಮಸ್ಯೆಗಳನ್ನು ಪಕ್ಕಕ್ಕೆ ತಳ್ಳುತ್ತಿವೆ’ ಎಂದರು.</p>.<p>‘ಪ್ರಗತಿಶೀಲತೆ ಎಲ್ಲ ಕಾಲದ ಗುಣ ಆಗಿರಬೇಕು. ಆದರೆ, ಈಚಿನ 20 ವರ್ಷಗಳಲ್ಲಿ ಪ್ರಗತಿಶೀಲತೆ ಇಲ್ಲವಾಗಿದೆ. ಕಟ್ಟೀಮನಿ ಅವರು ಕಾದಂಬರಿ ಬರೆದಾಗ ಅನಕ್ಷರತೆಯಿಂದಾಗಿ ಕೆಲವರಿಗೆ ಅದನ್ನು ಓದಲು ಸಾಧ್ಯವಾಗಲಿಲ್ಲ.ಅಕ್ಷರಸ್ಥರು ಓದಲು ಪ್ರಾರಂಭಿಸಿದಾಗ ಕೃತಿಗಳು ದೊರೆಯದಂತೆ ಪಿತೂರಿ ಮಾಡಲಾಯಿತು’ ಎಂದರು.</p>.<p>ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಪ್ರಗತಿಶೀಲ ಕಾಲಘಟ್ಟ ಈ ಸಮಾಜದ ಮೇಲೆ ಮಹತ್ವದ ಪರಿಣಾಮ ಬೀರಿದೆ. ಈ ಕಾಲಘಟ್ಟ ಮೌನಕ್ಕೆ ಮಾತು ಕೊಟ್ಟಿತು. ಸ್ವಾತಂತ್ರ್ಯೋತ್ತರ ಬೆಳವಣಿಗೆ ಹಾಗೂ ಸ್ವಾತಂತ್ರ್ಯ ಪೂರ್ವದ ಆಶಯಗಳು ಇದಕ್ಕೆ ಪ್ರಮುಖ ಕಾರಣ. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಕೃತಿಗಳ ಪುಸ್ತಕ ಮಾಲೆಯನ್ನು ಸರ್ಕಾರ ಹೊರತರಬೇಕು. ಯುವಪೀಳಿಗೆ ಅದನ್ನು ಓದುವಂತಾಗಬೇಕು’ ಎಂದರು.</p>.<p>ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಕಾರ್ಯದರ್ಶಿಪ್ರೊ.ಎಸ್.ಎನ್. ನಾಗರಾಜರೆಡ್ಡಿ, ‘ಇವತ್ತಿನ ಕಾಲಘಟ್ಟದಲ್ಲಿ ಪ್ರಗತಿಶೀಲ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕಿದೆ. ಈಗಿನ ಸನ್ನಿವೇಶ ನೋಡಿದರೆ ಸಮಾಜ ವಿನಾಶದತ್ತಸಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>