ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇನ್ಸ್ಟಿಟ್ಯೂಟ್ ಅಧ್ಯಕ್ಷ ಎಂಟಿ ರಂಗಾರೆಡ್ಡಿ, ‘ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ’ಗೆ ಗಣಿ ನಿಯಂತ್ರಣಾಧಿಕಾರಿ ವಿ. ಜಯಕೃಷ್ಣ ಬಾಬು, ಗಣಿ ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಕೆ. ಮಧುಸೂದನ್ ಮತ್ತು ಬೆಂಗಳೂರು ಗಣಿ ಸುರಕ್ಷತಾ ನಿರ್ದೇಶಕ ಮುರಳೀಧರ ಬಿದರಿ ಆಯ್ಕೆಯಾಗಿದ್ದಾರೆ. ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಎಫ್ಐಇ ಮಾಜಿ ನಿರ್ದೇಶಕ ಡಿ.ವಿ. ಪಿಚ್ಚಮುತ್ತು ಅವರಿಗೆ ನೀಡಲಾಗುವುದು. ‘ಐಇಐ ಯಂಗ್ ಎಂಜಿನಿಯರ್ ಪ್ರಶಸ್ತಿ’ಗೆ ಧನ್ಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಾಯಕ ಪ್ರಾಧ್ಯಾಪಕ ಅಶೋಕ್ ಕುಮಾರ್, ಹೇಮಂತ್ ಅಗರವಾಲ್, ಸತ್ಯ ಪ್ರಕಾಶ್ ಸಾಹು ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.