<p><strong>ಬೆಂಗಳೂರು:</strong>ವೇತನ ತಾರತಮ್ಯ, ಸಮ್ಮಿಶ್ರ ವೈದ್ಯಕೀಯ ಪದ್ಧತಿ ಅನುಸರಿಸಲು ಅಡ್ಡಿ ಮಾಡುವುದು ಸೇರಿದಂತೆ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ನ್ಯಾಷನಲ್ ಇಂಟಿಗ್ರೇಟೆಡ್್ ಮೆಡಿಕಲ್್ ಅಸೋಸಿಯೇಷನ್ (ಎನ್ಐಎಂಎ) ವೈದ್ಯರು ಆಯುಷ್ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.</p>.<p>‘ಕಳೆದ 7ರಂದು ಸರ್ಕಾರವು, ಸರ್ಕಾರಿ ಸೇವೆಯಲ್ಲಿರುವ ಆಯುಷ್ ವೈದ್ಯರು ಅಲೋಪಥಿ ಔಷಧಗಳ ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ. ಇದು ಏಕಪಕ್ಷೀಯ ಆದೇಶ.ಎನ್ಐಎಂಎ ಸಂಘದ ಅಭಿಪ್ರಾಯವನ್ನೂ ಪರಿಗಣಿಸದೆ ಈ ಆದೇಶ ಮಾಡಲಾಗಿದೆ. ಎನ್ಐಎಂಎ 70 ವರ್ಷಗಳ ಇತಿಹಾಸವಿರುವ, ಭಾರತೀಯ ಚಿಕಿತ್ಸಾ ವೈದ್ಯ ಪದ್ಧತಿಗಳ ವೈದ್ಯರನ್ನು ಪ್ರತಿನಿಧಿಸುವ ಸಂಸ್ಥೆ. ಅದರ ಅಭಿಪ್ರಾಯ ಕೇಳಬೇಕಿತ್ತು’ ಎಂದು ವೈದ್ಯರು ಹೇಳಿದರು.</p>.<p>ಸಂಸ್ಥೆಯ ಸಮ್ಮಿಶ್ರ ವೈದ್ಯಕೀಯ ಪದ್ಧತಿ ಅಂದರೆ, ಆಯುರ್ವೇದ ಮತ್ತು ಆಧುನಿಕ ವೈದ್ಯಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪದ್ಧತಿ ಅನುಸರಿಸುವವರಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಸರ್ಕಾರ ಈ ರೀತಿ ಆದೇಶ ಹೊರಡಿಸಿದೆ ಎಂದು ವೈದ್ಯರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಇದಲ್ಲದೆ, ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡಿದರು.</p>.<p>‘ಈ ಬೇಡಿಕೆ ಈಡೇರಿಸಬೇಕು ಮತ್ತು ವೇತನ ತಾರತಮ್ಯ ಸರಿಪಡಿಸಬೇಕು’ ಎಂದು ಸಂಸ್ಥೆಯ ರಾಜ್ಯಘಟಕದ ಅಧ್ಯಕ್ಷ ಡಾ.ಆರ್.ಜಿ. ಭೂಸನೂರಮಠ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ವೇತನ ತಾರತಮ್ಯ, ಸಮ್ಮಿಶ್ರ ವೈದ್ಯಕೀಯ ಪದ್ಧತಿ ಅನುಸರಿಸಲು ಅಡ್ಡಿ ಮಾಡುವುದು ಸೇರಿದಂತೆ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ನ್ಯಾಷನಲ್ ಇಂಟಿಗ್ರೇಟೆಡ್್ ಮೆಡಿಕಲ್್ ಅಸೋಸಿಯೇಷನ್ (ಎನ್ಐಎಂಎ) ವೈದ್ಯರು ಆಯುಷ್ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.</p>.<p>‘ಕಳೆದ 7ರಂದು ಸರ್ಕಾರವು, ಸರ್ಕಾರಿ ಸೇವೆಯಲ್ಲಿರುವ ಆಯುಷ್ ವೈದ್ಯರು ಅಲೋಪಥಿ ಔಷಧಗಳ ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ. ಇದು ಏಕಪಕ್ಷೀಯ ಆದೇಶ.ಎನ್ಐಎಂಎ ಸಂಘದ ಅಭಿಪ್ರಾಯವನ್ನೂ ಪರಿಗಣಿಸದೆ ಈ ಆದೇಶ ಮಾಡಲಾಗಿದೆ. ಎನ್ಐಎಂಎ 70 ವರ್ಷಗಳ ಇತಿಹಾಸವಿರುವ, ಭಾರತೀಯ ಚಿಕಿತ್ಸಾ ವೈದ್ಯ ಪದ್ಧತಿಗಳ ವೈದ್ಯರನ್ನು ಪ್ರತಿನಿಧಿಸುವ ಸಂಸ್ಥೆ. ಅದರ ಅಭಿಪ್ರಾಯ ಕೇಳಬೇಕಿತ್ತು’ ಎಂದು ವೈದ್ಯರು ಹೇಳಿದರು.</p>.<p>ಸಂಸ್ಥೆಯ ಸಮ್ಮಿಶ್ರ ವೈದ್ಯಕೀಯ ಪದ್ಧತಿ ಅಂದರೆ, ಆಯುರ್ವೇದ ಮತ್ತು ಆಧುನಿಕ ವೈದ್ಯಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪದ್ಧತಿ ಅನುಸರಿಸುವವರಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಸರ್ಕಾರ ಈ ರೀತಿ ಆದೇಶ ಹೊರಡಿಸಿದೆ ಎಂದು ವೈದ್ಯರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಇದಲ್ಲದೆ, ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡಿದರು.</p>.<p>‘ಈ ಬೇಡಿಕೆ ಈಡೇರಿಸಬೇಕು ಮತ್ತು ವೇತನ ತಾರತಮ್ಯ ಸರಿಪಡಿಸಬೇಕು’ ಎಂದು ಸಂಸ್ಥೆಯ ರಾಜ್ಯಘಟಕದ ಅಧ್ಯಕ್ಷ ಡಾ.ಆರ್.ಜಿ. ಭೂಸನೂರಮಠ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>