<p><strong>ಬೆಂಗಳೂರು:</strong> ಯೆಸ್ ಬ್ಯಾಂಕ್ನಿಂದ ₹ 712 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪದಡಿ ನಗರದ ನಿತೇಶ್ ಸಮೂಹ ಸಂಸ್ಥೆಗಳ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>‘ಯೆಸ್ ಬ್ಯಾಂಕ್ನ ಕಸ್ತೂರ್ಬಾ ರಸ್ತೆಯಲ್ಲಿರುವ ಶಾಖೆಯ ವ್ಯವಸ್ಥಾಪಕ ಆಶಿಷ್ ವಿನೋದ್ ಜೋಷಿ ಅವರು ದೂರು ನೀಡಿದ್ದಾರೆ. ನಿತೇಶ್ ಸಮೂಹ ಸಂಸ್ಥೆಗಳು ಸೇರಿ 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ನಿತೇಶ್ ಎಸ್ಟೇಟ್ಸ್, ನಿತೇಶ್ ಹೌಸಿಂಗ್ ಡೆವಲಪರ್ಸ್, ನಿತೇಶ್ ಅರ್ಬನ್ ಡೆವಲಪ್ಮೆಂಟ್, ನಿತೇಶ್ ಶೆಟ್ಟಿ ಪ್ರಮೋಟರ್ಸ್ ಆಡಳಿತ ಮಂಡಳಿ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.</p>.<p>ಸಪ್ತ ಋಷಿ ವೈದ್ಯನಾಥನ್, ಕುಮಾರ್ ನೆಲ್ಲೂರು ಗೋಪಾಲಕೃಷ್ಣನ್, ಸುಬ್ರಮಣ್ಯನ್ ಅನಂತನಾರಾಯಣ್, ಪ್ರದೀಪ್ ನಾರಾಯಣ್, ಮಹೇಶ್ ಭೂಪತಿ, ಚಂದ್ರಶೇಖರ್ ಪ್ರಶಾಂತ್ ಕುಮಾರ್ ಹಾಗೂ ಇತರರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.</p>.<p>‘ಎಂ.ಜಿ. ರಸ್ತೆಯಲ್ಲಿ ನಿತೇಶ್ ಸಮೂಹ ಸಂಸ್ಥೆಗಳ ಕಚೇರಿ ಇದೆ. ಪ್ರಕರಣ ದಾಖಲಾಗುತ್ತಿದ್ದಂತೆ ದಾಖಲೆಗಳನ್ನು ಪರಿಶೀಲಿಸಿ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆಯಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದೂ ಹೇಳಿವೆ.</p>.<p><strong>ಯೋಜನೆಗಳಿಗಾಗಿ ಸಾಲ:</strong> ‘ಹೈಡ್ ಪಾರ್ಕ್, ಕೊಲಂಬಸ್ ಸ್ಕ್ವೇರ್, ನಾಪವ್ಯಾಲಿ, ಪಿಷರ್ ದ್ವೀಪ, ಮೆಲ್ಬೊರ್ನ್ ಪಾರ್ಕ್, ನ್ಯೂ ಥಣಿಸಂದ್ರ, ಗ್ರಾಂಡ್ ಕ್ಯಾನಿಯನ್, ಕೇಪ್ ಕಾರ್ಡ್, ಪಾಲೋ ಹಾಲ್ಟೊ, ಶಾಂತಕ್ಲಾರ, ನಿತೇಶ್ ಪ್ಲಾಜಾ ಹಾಗೂ ನಿತೇಶ್ ಸಾಹೋ ಯೋಜನೆಗಳ ಅಭಿವೃದ್ಧಿಗಾಗಿ ಆರೋಪಿಗಳು ಬ್ಯಾಂಕ್ನಿಂದ ₹ 712 ಕೋಟಿ ಸಾಲ ಪಡೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಆರೋಪಿಗಳು, ಇದುವರೆಗೂ ಸಾಲ ಮರು ಪಾವತಿಸಿಲ್ಲ. ಅಪರಾಧ ಸಂಚು ರೂಪಿಸಿದ್ದ ಆರೋಪಿಗಳು ನಂಬಿಕೆ ದ್ರೋಹವೆಸಗಿ ವಂಚಿಸಿರುವುದಾಗಿ ದೂರುದಾರರು ಆರೋಪಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಯೆಸ್ ಬ್ಯಾಂಕ್ನಿಂದ ₹ 712 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪದಡಿ ನಗರದ ನಿತೇಶ್ ಸಮೂಹ ಸಂಸ್ಥೆಗಳ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>‘ಯೆಸ್ ಬ್ಯಾಂಕ್ನ ಕಸ್ತೂರ್ಬಾ ರಸ್ತೆಯಲ್ಲಿರುವ ಶಾಖೆಯ ವ್ಯವಸ್ಥಾಪಕ ಆಶಿಷ್ ವಿನೋದ್ ಜೋಷಿ ಅವರು ದೂರು ನೀಡಿದ್ದಾರೆ. ನಿತೇಶ್ ಸಮೂಹ ಸಂಸ್ಥೆಗಳು ಸೇರಿ 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ನಿತೇಶ್ ಎಸ್ಟೇಟ್ಸ್, ನಿತೇಶ್ ಹೌಸಿಂಗ್ ಡೆವಲಪರ್ಸ್, ನಿತೇಶ್ ಅರ್ಬನ್ ಡೆವಲಪ್ಮೆಂಟ್, ನಿತೇಶ್ ಶೆಟ್ಟಿ ಪ್ರಮೋಟರ್ಸ್ ಆಡಳಿತ ಮಂಡಳಿ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.</p>.<p>ಸಪ್ತ ಋಷಿ ವೈದ್ಯನಾಥನ್, ಕುಮಾರ್ ನೆಲ್ಲೂರು ಗೋಪಾಲಕೃಷ್ಣನ್, ಸುಬ್ರಮಣ್ಯನ್ ಅನಂತನಾರಾಯಣ್, ಪ್ರದೀಪ್ ನಾರಾಯಣ್, ಮಹೇಶ್ ಭೂಪತಿ, ಚಂದ್ರಶೇಖರ್ ಪ್ರಶಾಂತ್ ಕುಮಾರ್ ಹಾಗೂ ಇತರರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.</p>.<p>‘ಎಂ.ಜಿ. ರಸ್ತೆಯಲ್ಲಿ ನಿತೇಶ್ ಸಮೂಹ ಸಂಸ್ಥೆಗಳ ಕಚೇರಿ ಇದೆ. ಪ್ರಕರಣ ದಾಖಲಾಗುತ್ತಿದ್ದಂತೆ ದಾಖಲೆಗಳನ್ನು ಪರಿಶೀಲಿಸಿ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆಯಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದೂ ಹೇಳಿವೆ.</p>.<p><strong>ಯೋಜನೆಗಳಿಗಾಗಿ ಸಾಲ:</strong> ‘ಹೈಡ್ ಪಾರ್ಕ್, ಕೊಲಂಬಸ್ ಸ್ಕ್ವೇರ್, ನಾಪವ್ಯಾಲಿ, ಪಿಷರ್ ದ್ವೀಪ, ಮೆಲ್ಬೊರ್ನ್ ಪಾರ್ಕ್, ನ್ಯೂ ಥಣಿಸಂದ್ರ, ಗ್ರಾಂಡ್ ಕ್ಯಾನಿಯನ್, ಕೇಪ್ ಕಾರ್ಡ್, ಪಾಲೋ ಹಾಲ್ಟೊ, ಶಾಂತಕ್ಲಾರ, ನಿತೇಶ್ ಪ್ಲಾಜಾ ಹಾಗೂ ನಿತೇಶ್ ಸಾಹೋ ಯೋಜನೆಗಳ ಅಭಿವೃದ್ಧಿಗಾಗಿ ಆರೋಪಿಗಳು ಬ್ಯಾಂಕ್ನಿಂದ ₹ 712 ಕೋಟಿ ಸಾಲ ಪಡೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಆರೋಪಿಗಳು, ಇದುವರೆಗೂ ಸಾಲ ಮರು ಪಾವತಿಸಿಲ್ಲ. ಅಪರಾಧ ಸಂಚು ರೂಪಿಸಿದ್ದ ಆರೋಪಿಗಳು ನಂಬಿಕೆ ದ್ರೋಹವೆಸಗಿ ವಂಚಿಸಿರುವುದಾಗಿ ದೂರುದಾರರು ಆರೋಪಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>