ಬೆಂಗಳೂರು: ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ 12ನೇ ಘಟಿಕೋತ್ಸವದಲ್ಲಿ 54 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರವನ್ನು ಪಡೆದರು.
ಸ್ಟಾರ್ಟಪ್ ಕಂಪನಿ ಸಲಹೆಗಾರ ರವಿನಾರಾಯಣ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.
ಯುವ ಜನರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಹಾಗೂ ಬೆಂಗಳೂರು ನಗರ ಮಾದರಿ ನಗರವಾಗಿ ಬೆಳೆಯುತ್ತಿದ್ದು ಯುವಕರ ಪೂರ್ಣ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಸಲಹೆಗಾರ ಎನ್.ಆರ್.ಶೆಟ್ಟಿ, ನಿಟ್ಟೆ ಎಜುಕೇಶನ್ ಟ್ರಸ್ಟ್ (ಬೆಂಗಳೂರು)ನ ಆಡಳಿತಾಧಿಕಾರಿ ರೋಹಿತ್ ಪುಂಜ, ಪದವಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಪ್ರಾಂಶುಪಾಲ ಎಚ್,ಸಿ, ನಾಗರಾಜ್, ನಿರ್ದೇಶಕ ಡಾ. ಎಂ. ವೇಣುಗೋಪಾಲ್ ಹಾಗೂ ಪರೀಕ್ಷಾ ಮುಖ್ಯಸ್ಥರಾದ ಕೋಟೇಶ್ವರ ರಾವ್ ಉಪಸ್ಥಿತರಿದ್ದರು.