‘ಸೋಂಕಿತರ ಕೈಗೆ ಮುದ್ರೆ ಹಾಕುವ ಕಾರ್ಯವನ್ನು ನಾವು ಆರಂಭಿಸಿದ್ದೇವೆ. ಗುರುವಾರದವರೆಗೆ, ಬಿಬಿಎಂಪಿ ಪಶ್ಚಿಮ ವಲಯದಲ್ಲಿ 9,811 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ. ವಾರ್ಡ್ ವಾರು ತಂಡ ರಚಿಸಲಾಗಿದೆ. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಬಿಎಲ್ಒಗಳು ಹಾಗೂ ಕಂದಾಯ ಇಲಾಖೆಯಿಂದ ಒಬ್ಬರನ್ನು ಆಯ್ಕೆ ಮಾಡಿಕೊಂಡು ತಂಡಗಳನ್ನು ರಚಿಸಲಾಗಿದೆ. ಈ ತಂಡ ಸೀಲ್ ಹಾಕಲಿದೆ. ಜೊತೆಗೆ, ವೈದ್ಯರೊಬ್ಬರಿದ್ದು ಅವರು ಸೋಂಕಿತರ ಸೋಂಕಿನ ಲಕ್ಷಣ ಹಾಗೂ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸುತ್ತಾರೆ’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಬಿ. ಶಿವಸ್ವಾಮಿ ಹೇಳಿದರು.