ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟ ಉತ್ತೇಜನ ಕ್ರಮಗಳಿಗೆ ಪಾಲಿಕೆ ಕಡಿವಾಣ

ಖರೀದಿದಾರರಿಗೆ ‘ಕೊಡುಗೆ’ ಕೊಡುವಂತಿಲ್ಲ, ಮಾರಾಟ ಮೇಳ ಏರ್ಪಡಿಸುವಂತಿಲ್ಲ– ಚಿಲ್ಲರೆ ಮಾರಾಟ ಮಳಿಗೆಗಳಿಗೆ ಸೂಚನೆ
Last Updated 15 ಜೂನ್ 2021, 2:54 IST
ಅಕ್ಷರ ಗಾತ್ರ

ಬೆಂಗಳೂರು: ಚಿಲ್ಲರೆ ಮಾರಾಟ ಮಳಿಗೆಗಳ ಬಳಿ ಜನಸಂದಣಿ ಉಂಟಾಗುವುದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿಯು ಇಂತಹ ಮಳಿಗೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಚಿಲ್ಲರೆ ಮಾರಾಟ ಮಳಿಗೆಗಳು ಉತ್ಪನ್ನಗಳ ಮಾರಾಟ ಉತ್ತೇಜನಕ್ಕಾಗಿ ವಿಶೇಷ ಕೊಡುಗೆಗಳನ್ನು ನೀಡುವಂತಿಲ್ಲ. ಮಾರಾಟ ಮೇಳಗಳನ್ನು ಹಮ್ಮಿಕೊಳ್ಳುವಂತಿಲ್ಲ.

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಅದರ ಪ್ರಮುಖ ಅಂಶಗಳು ಇಂತಿವೆ.

* ಮಳಿಗೆಗಳ ಬಳಿ ಜನಜಂಗುಳಿ ಸೇರಲು ಕಾರಣವಂತಹ ‘ಕೊಡುಗೆ’ಗಳನ್ನು ನೀಡಬಾರದು.

* ನಿರ್ದಿಷ್ಟ ಕಾಲಮಿತಿಯಯೊಳಗೆ ಬಳಸಬಹುದಾದ ಟೋಕನ್‌ಗಳನ್ನು ನೀಡುವ ಮೂಲಕ ಮಳಿಗೆಯಲ್ಲಿ ಗ್ರಾಹಕರ ದಟ್ಟಣೆ ಉಂಟಾಗುವುದನ್ನು ತಡೆಯಬಹುದು. ನಿರ್ಬಂಧದ ಆದೇಶ ಜಾರಿಯಲ್ಲಿದ್ದರೂ ಜನರಿಗೆ ಅವಶ್ಯಕ ಸಾಮಗ್ರಿ ಸಿಗಬೇಕು ಎಂಬ ಕಾರಣಕ್ಕೆ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

* ಗ್ರಾಹಕರ ಬಳಕೆಗಾಗಿ ಸ್ಯಾನಿಟೈಸರ್‌ಗಳನ್ನು ಮಳಿಗೆಗಳಲ್ಲಿ ಒದಗಿಸಬೇಕು.

* ಮಳಿಗೆಯಲ್ಲಿ ಗ್ರಾಹಕರು ಕೈಯಿಂದ ಮುಟ್ಟುವಂತಹ ರೇಲಿಂಗ್‌, ಬಾಗಿಲ ಕೈಹಿಡಿ, ನೆಲ, ಬಿಲ್ಲಿಂಗ್‌ ಕೌಂಟರ್‌ಗಳ ಮೇಲ್ಮೈ ಮುಂತಾದ ಸ್ಥಳಗಳನ್ನು ಸೋಡಿಯಂ ಹೈಪೋಕ್ಲೋರೈಟ್‌ನಿಂದ ಅಥವಾ ಬ್ಲೀಚಿಂಗ್ ಪೌಡರ್‌ನಿಂದ ತಯಾರಿಸಿದ ದ್ರಾವಣದಿಂದ ಆಗಾಗ ಸ್ವಚ್ಛಗೊಳಿಸಬೇಕು.

* ಸಿಬ್ಬಂದಿಯೂ ವೈಯಕ್ತಿಕ ಸ್ವಚ್ಛತೆಗೆ ಗಮನ ಹರಿಸಬೇಕು. ಸಿಬ್ಬಂದಿಗಳೆಲ್ಲರಿಗೂ ಕೋವಿಡ್ ಲಸಿಕೆ ನೀಡಬೇಕು. ಸೋಂಕಿನ ಲಕ್ಷಣಗಳಿರುವ ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವ ಸಿಬ್ಬಂದಿಗೆ ಅಸೌಖ್ಯದ ರಜೆ ಮಂಜೂರು ಮಾಡಿ ಚಿಕಿತ್ಸೆ ಪಡೆಯುವಂತೆ ಸೂಚಿಸಬೇಕು.

* ಗ್ರಾಹಕರು ಉತ್ಪನ್ನಗಳನ್ನು ಮುಟ್ಟುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಉತ್ಪನ್ನ ತೆಗೆದುಕೊಡಲು ಸಿಬ್ಬಂದಿಯನ್ನು ನಿಯೋಜಿಸಬೇಕು.

* ಬಿಲ್ಲಿಂಗ್‌ ಕೌಂಟರ್‌ನಲ್ಲಿ ಗ್ರಾಹಕರ ದಟ್ಟಣೆ ಕಡಿಮೆಗೊಳಿಸಲು, ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಬೇಕು. ವಾರಾಂತ್ಯದಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ವ್ಯವಸ್ಥೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT