ಪ್ರತಿಭಟನೆ ವೇಳೆ ಮಾತನಾಡಿದ ಅವರು, ’ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿವಾನಂದನಗರ, ಹೆಗ್ಗನಹಳ್ಳಿ, ರಾಜಗೋಪಾಲನಗರ, ಮಂಜುನಾಥನಗರ, ಮಲ್ಲಸಂದ್ರದಲ್ಲಿ ಈ ಹಿಂದೆಯೇ ಬಡವರಿಗೆ ನಿವೇಶನಗಳನ್ನು ನೀಡಲಾಗಿತ್ತು. ಆದರೆ, ಇಂದಿನವರೆಗೂ ಹಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಶಾಸಕರ ಹಿಂಬಾಲಕರಿಗಷ್ಟೇ ಈ ಯೋಜನೆ ಸೌಲಭ್ಯ ಸಿಕ್ಕಿದೆ. ಬಡವರಿಗೆ ಏನೂ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.