ಸಾಹಿತ್ಯ ಕ್ಷೇತ್ರದ ಎಂ.ಎಸ್. ಆಶಾದೇವಿ ಮತ್ತು ಡಿ.ಸಿ. ರಾಮಚಂದ್ರ, ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದ ಮುಕ್ತಾ.ಬಿ. ಕಾಗಲಿ, ಸಾರ್ವಜನಿಕ ಆಡಳಿತ ಕ್ಷೇತ್ರದ ಡಿ.ಎಂ. ಸತೀಶ್ಕುಮಾರ್, ಎಚ್.ಸಿ. ಗಿರೀಶ್, ಪಿ. ಶಿವಕುಮಾರ್ ಮತ್ತು ಎನ್. ವಿಜಯಕುಮಾರ್, ನ್ಯಾಯಾಂಗ ಕ್ಷೇತ್ರದ ಎಂ.ವಿ. ರೇವಣಸಿದ್ದಯ್ಯ, ಸಂಘಟನಾ ಕ್ಷೇತ್ರದ ಆರ್.ಬಿ. ಶಂಕರ್ ಮತ್ತು ಸಮಾಜ ಸೇವಾ ಕ್ಷೇತ್ರದ ಸಿ.ಪಿ. ಉಮೇಶ ಅವರಿಗೆ ಕದಂಬ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮ್ಮೇಳನದಲ್ಲಿ ವಿವಿಧ ಸಾಹಿತಿಕ ಗೋಷ್ಠಿಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.