ಆನೇಕಲ್ ತಾಲ್ಲೂಕಿನ ಅರ್ಹತೆ ಇಲ್ಲದ 190 ಶಿಕ್ಷಕರ ಹೆಸರನ್ನು ತಹಶೀಲ್ದಾರ್ ದಿನೇಶ್ ಅವರು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದರು. ಅದೇ ರೀತಿ, ರಾಜರಾಜೇಶ್ವರಿ ನಗರ ಉಪವಲಯದ ಬಿಬಿಎಂಪಿ ಕಂದಾಯ ಅಧಿಕಾರಿ ವೈ. ಬೈರೇಗೌಡ ಅವರು, 187 ಅನರ್ಹ ಮತದಾರರನ್ನು ಪಟ್ಟಿಗೆ ಸೇರಿಸಿದ್ದರು. ಹೀಗೆ, ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಈ ಇಬ್ಬರು ಅಧಿಕಾರಿಗಳನ್ನು ಪ್ರಾದೇಶಿಕ ಆಯುಕ್ತ ಇ.ಪಿ. ಇಕ್ಕೇರಿ ಅಮಾನತು ಮಾಡಿದ್ದಾರೆ.