ಪಾದರಾಯನಪುರದಲ್ಲಿ ನಡೆದ ಗಲಾಟೆ ಆರೋಪಿಗಳನ್ನು ಬಂಧಿಸಿದ್ದ ತಂಡದಲ್ಲಿ ಸಿಸಿಬಿ ಪೊಲೀಸರು ಇದ್ದರು. ಆರೋಪಿಗಳಿಗೆ ಕೊರೊನಾ ಇರುವುದು ದೃಢಪಟ್ಟಿದ್ದರಿಂದ ಎಲ್ಲ ಪೊಲೀಸರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಎಲ್ಲರ ವರದಿ ನೆಗಟಿವ್ ಬಂದಿತ್ತು. ಈಗ ಪುನಃ ಸಿಸಿಬಿ ಪೊಲೀಸರು ಬಂಧಿಸಿರುವ ಆರೋಪಿಗೆ ಕೊರೊನಾ ಇರುವುದು ಖಾತ್ರಿಯಾಗುತ್ತಿದ್ಧಂತೆ, ಪುನಃ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.