ಬೆಂಗಳೂರು: ದರ್ಪಣ ಫೌಂಡೇಷನ್ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜುಲೈ 5ರಂದು ಬೆಳಿಗ್ಗೆ 10.30ಕ್ಕೆ ಆನ್ಲೈನ್ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಪನಿಷದ್ ಸರಣಿಯ ಆನ್ಲೈನ್ ಆವೃತ್ತಿಯ ಚರ್ಚೆಯಲ್ಲಿ ಅಮೆರಿಕದ ವೈದಿಕ ವಿದ್ವಾಂಸ ಡೇವಿಡ್ ಫ್ರಾಲಿ ಹಾಗೂ ಸಹಜ ಸ್ಮೃತಿ ಯೋಗದ ಪ್ರತಿಪಾದಕ ಗುರೂಜಿ ನಂದಕಿಶೋರಿ ತಿವಾರಿ ಭಾಗವಹಿಸಲಿದ್ದಾರೆ.
ಆಸಕ್ತರು https://www.facebook.com/darpanmirroringlife ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು. ---
11ಕ್ಕೆ 'ಚಿಟ್ಟೆಗಳ ಪ್ರಪಂಪ' ಕಾರ್ಯಕ್ರಮ
ಬೆಂಗಳೂರು: ಟಿಎಸ್ಪಿ ಏಷಿಯಾ ಸಂಸ್ಥೆ ಹಾಗೂ ರೋರ್ ಸಂಸ್ಥೆಯ ಸಹಯೋಗದಲ್ಲಿ 'ಚಿಟ್ಟೆಗಳ ಪ್ರಪಂಚದ ಪರಿಚಯ' ಎಂಬ ಚರ್ಚಾ ಕಾರ್ಯಕ್ರಮವನ್ನು ಇದೇ 11ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಚರ್ಚೆಯಲ್ಲಿ ರೋರ್ ಸಂಸ್ಥೆಯ ಸ್ಥಾಪಕ ಶರಣ್ ಮಾತನಾಡಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಯುವಕರು ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರು https://tspasia.org/academy/ನಲ್ಲಿ ನೋಂದಣಿಯಾಗುವಂತೆ ತಿಳಿಸಿದೆ.