ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ‘ಪಾಲಿಕೆ ಅರ್ಥಿಕ ಸಂಕಷ್ಟ ಎದುರಿಸುತ್ತಿದೆ ಎನ್ನುತ್ತೀರಿ, ಪ್ರಯಾಣಿಕರ ತಂಗುದಾಣ ನಿರ್ಮಿಸುವ ಗುತ್ತಿಗೆ ಪಡೆದ ಸಂಸ್ಥೆಗಳು ಪಾಲಿಕೆಗೆ ತಿಂಗಳಿಗೆ ₹ 45 ಸಾವಿರ ನೆಲಬಾಡಿಗೆ ನೀಡಬೇಕು. ಇದುವರೆಗೆ ₹ 26 ಕೋಟಿ ವಸೂಲಿ ಮಾಡಬೇಕಾದ ಕಡೆ ಕೇವಲ ₹ 6 ಕೋಟಿ ವಸೂಲಿ ಮಾಡಲಾಗಿದೆ. ಗುತ್ತಿಗೆ ಪಡೆದ ಎರಡು ಸಂಸ್ಥೆಗಳು 1,650 ಬಸ್ನಿಲ್ದಾಣಗಳ ಬದಲು 642 ನಿಲ್ದಾಣಗಳನ್ನು ಮಾತ್ರ ನಿರ್ಮಿಸಿವೆ. ಮೊದಲು ಈ ಬಾಕಿ ವಸೂಲಿ ಮಾಡಿ’ ಎಂದರು.