<p><strong>ಬೆಂಗಳೂರು:</strong> ಮಿದುಳು ನಿಷ್ಕ್ರೀಯವಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂಗಾಗಗಳನ್ನು ಕುಟುಂಬಸ್ಥರು ದಾನ ಮಾಡಿರುವ ಘಟನೆಯು ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಜರುಗಿದೆ.</p><p>ನ.29ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟೇಶ್ ಕೆ.(46) ಎನ್ನುವವರಿಗೆ ಮಿದುಳು ನಿಷ್ಕ್ರೀಯವಾಗಿತ್ತು. ಚಿಕಿತ್ಸೆಗಾಗಿ ಯಶವಂತಪುರದಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಗುಣಮುಖರಾಗುವ ಲಕ್ಷಣ ಕಂಡುಬಂದಿರಲಿಲ್ಲ. </p><p>ವೆಂಕಟೇಶ್ ಅವರಿಗೆ ಡಿ.1ರಂದು ಸಂಪೂರ್ಣ ಮಿದುಳು ನಿಷ್ಕ್ರೀಯವಾಗಿತ್ತು ಎಂದು ಅವರಿಗೆ ಚಿಕಿತ್ಸೆ ನೀಡುತಿದ್ದ ವೈದ್ಯರು ಮಾಹಿತಿ ನೀಡಿದ್ದಾರೆ.</p><p>ಆಘಾತದ ನಡುವೆಯೂ ಅವರ ಮೃತರ ಕುಟುಂಬದವರು ಅಂಗಾಗ ದಾನ ಮಾಡಲು ಬಯಸಿದ್ದರು. ಅವರ ಯಕೃತ್ತು, ಮೂತ್ರಪಿಂಡ, ಕಣ್ಣು, ಶ್ವಾಸಕೋಶ ಹಾಗೂ ಹೃದಯ ಕವಾಟಗಳನ್ನು ದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.</p><p>ವೆಂಕಟೇಶ್ ಅವರು ಕಷ್ಟ ಜೀವಿಯಾಗಿದ್ದರು. ಅವರ ಅಂಗಾಗಗಳನ್ನು ದಾನ ಮಾಡುವ ಮೂಲಕ ಅವರ ಸಾವಿಗೆ ಗೌರವ ಸೂಚಿಸಿದ್ದೇವೆ. ಅಂಗಾಗ ದಾನದ ಮೂಲಕ ಅವರು ಇನ್ನೂ ನಮ್ಮ ಜೊತೆಗಿದ್ದಾರೆ ಎಂದು ಅನಿಸುತ್ತಿದೆ ಎಂದು ಅವರ ಸಹೋದರಿ ಹೇಳಿದ್ದಾರೆ. </p>
<p><strong>ಬೆಂಗಳೂರು:</strong> ಮಿದುಳು ನಿಷ್ಕ್ರೀಯವಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂಗಾಗಗಳನ್ನು ಕುಟುಂಬಸ್ಥರು ದಾನ ಮಾಡಿರುವ ಘಟನೆಯು ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಜರುಗಿದೆ.</p><p>ನ.29ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟೇಶ್ ಕೆ.(46) ಎನ್ನುವವರಿಗೆ ಮಿದುಳು ನಿಷ್ಕ್ರೀಯವಾಗಿತ್ತು. ಚಿಕಿತ್ಸೆಗಾಗಿ ಯಶವಂತಪುರದಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಗುಣಮುಖರಾಗುವ ಲಕ್ಷಣ ಕಂಡುಬಂದಿರಲಿಲ್ಲ. </p><p>ವೆಂಕಟೇಶ್ ಅವರಿಗೆ ಡಿ.1ರಂದು ಸಂಪೂರ್ಣ ಮಿದುಳು ನಿಷ್ಕ್ರೀಯವಾಗಿತ್ತು ಎಂದು ಅವರಿಗೆ ಚಿಕಿತ್ಸೆ ನೀಡುತಿದ್ದ ವೈದ್ಯರು ಮಾಹಿತಿ ನೀಡಿದ್ದಾರೆ.</p><p>ಆಘಾತದ ನಡುವೆಯೂ ಅವರ ಮೃತರ ಕುಟುಂಬದವರು ಅಂಗಾಗ ದಾನ ಮಾಡಲು ಬಯಸಿದ್ದರು. ಅವರ ಯಕೃತ್ತು, ಮೂತ್ರಪಿಂಡ, ಕಣ್ಣು, ಶ್ವಾಸಕೋಶ ಹಾಗೂ ಹೃದಯ ಕವಾಟಗಳನ್ನು ದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.</p><p>ವೆಂಕಟೇಶ್ ಅವರು ಕಷ್ಟ ಜೀವಿಯಾಗಿದ್ದರು. ಅವರ ಅಂಗಾಗಗಳನ್ನು ದಾನ ಮಾಡುವ ಮೂಲಕ ಅವರ ಸಾವಿಗೆ ಗೌರವ ಸೂಚಿಸಿದ್ದೇವೆ. ಅಂಗಾಗ ದಾನದ ಮೂಲಕ ಅವರು ಇನ್ನೂ ನಮ್ಮ ಜೊತೆಗಿದ್ದಾರೆ ಎಂದು ಅನಿಸುತ್ತಿದೆ ಎಂದು ಅವರ ಸಹೋದರಿ ಹೇಳಿದ್ದಾರೆ. </p>