‘ಮನೆ ಮಾಲೀಕ ಗೋವಿಂದರೆಡ್ಡಿ, ಬಾಡಿಗೆದಾರರ ಹಿನ್ನೆಲೆ ಬಗ್ಗೆ ವಿಚಾರಣೆ ಮಾಡಿರಲಿಲ್ಲ. ಗುರುತಿನ ಚೀಟಿಗಳನ್ನೂ ಪರಿಶೀಲಿಸಿರಲಿಲ್ಲ. ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುವ ಬಾಡಿಗೆದಾರರ ಬಗ್ಗೆ ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡುವಂತೆ ಸ್ಥಳೀಯರಲ್ಲಿ ಹಲವು ಬಾರಿ ಜಾಗೃತಿ ಮೂಡಿಸಲಾಗಿದೆ. ಇಷ್ಟಾದರೂ ಗೋವಿಂದರೆಡ್ಡಿ, ಬಾಡಿಗೆದಾರರ ಬಗ್ಗೆ ಠಾಣೆಗೆ ಮಾಹಿತಿ ನೀಡಿರಲಿಲ್ಲ’ ಎಂದು ತಿಳಿಸಿದರು.