ಹಿಂದೂಸ್ತಾನಿ ಗಾಯಕ ಡಾ.ನಾಗರಾಜ್ ರಾವ್ ಹವಾಲ್ದಾರ್ ಅವರು ಭೀಮಸೇನ ಜೋಷಿಯವರ ಪ್ರಸಿದ್ಧ ಹಾಡುಗಳನ್ನು ಪ್ರಸ್ತುತಪಡಿಸಿದರು. ಕಿರಾನ – ಘರಾನ ಮೂಲ ಶಾಸ್ತ್ರೀಯ ಗಾಯನದ ಜೊತೆಗೆ ಭಾಗ್ಯದ ಲಕ್ಷ್ಮಿ ಬಾರಮ್ಮ, ಕರುಣಿಸೋ ರಂಗ ಕರುಣಿಸೋ, ನೀನಿರದ ದಿನವಾ ಹೇಗೆ ನಾ ಕಳೆಯಲಿ ಹಾಡುಗಳನ್ನು ಹಾಡಿ ರಂಜಿಸಿದರು. ಗಾಯನದ ಮಧ್ಯೆ ಭೀಮಸೇನ ಜೋಷಿಯವರ ಬದುಕು, ಸಂಗೀತ ಸಾಧನೆ ಕುರಿತ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿದರು.