<p><strong>ಬೆಂಗಳೂರು:</strong> ಅಂಚೆಪಾಳ್ಯದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಚಿಪ್ಪುಹಂದಿಯೊಂದನ್ನು ಬಿಬಿಎಂಪಿ ವನ್ಯಜೀವಿ ರಕ್ಷಕರು ಮಂಗಳವಾರ ತಡರಾತ್ರಿ ರಕ್ಷಣೆ ಮಾಡಿದ್ದಾರೆ.</p>.<p>‘ಹೆದ್ದಾರಿ ಪಕ್ಕದಲ್ಲಿ ವಿಚಿತ್ರ ಜೀವಿ ಕಂಡು ಬಂದಿದೆ ಎಂದು ಅಂಚೆಪಾಳ್ಯದಿಂದ ಬಿಬಿಎಂಪಿ ಸಹಾಯವಾಣಿಗೆ ಯಾರೋ ಮಂಗಳವಾರ ರಾತ್ರಿ ಕರೆ ಮಾಡಿದ್ದರು. ರಾತ್ರಿ 12.30ರ ಸುಮಾರಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಈ ಚಿಪ್ಪುಹಂದಿ ಪತ್ತೆಯಾಯಿತು. ಅದಕ್ಕೆ ಸುಮಾರು ಎರಡೂ ವರ್ಷವಾಗಿರಬಹುದು. ಅದು ಸುಮಾರು 6 ಕೆ.ಜಿ. ತೂಗುತ್ತಿತ್ತು. ಅದು ಆರೋಗ್ಯವಾಗಿಯೇ ಇತ್ತು. ಹಾಗಾಗಿ ಅದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದ್ದೇವೆ’ ಎಂದು ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಚಿಪ್ಪುಹಂದಿಗಳು ಗೆದ್ದಲುಗಳನ್ನು ತಿಂದು ಬದುಕುವ ಜೀವಿಗಳು. ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಹೆಚ್ಚಿದಂತೆ ನಗರದಲ್ಲಿ ಹುತ್ತಗಳು ನಶಿಸಿವೆ. ಕಾಂಕ್ರೀಟ್ ಕಾಡಿನಿಂದಲೇ ತುಂಬಿರುವ ಬೆಂಗಳೂರಿನಲ್ಲಿ ಈ ಜೀವಿಗಳು ಬದುಕುವುದು ಕಷ್ಟ’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ಚಿಪ್ಪುಗಳಿಗಾಗಿ ಈ ಜೀವಿಗಳ ಕಳ್ಳಸಾಗಣೆ ಜಾಸ್ತಿ ಆಗಿದೆ. ನಗರದ ಪೊಲೀಸರೂ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಚಿಪ್ಪುಹಂದಿ ಚಿಪ್ಪುಗಳನ್ನು ವಶಪಡಿಸಿಕೊಂಡಿದ್ದರು. ಹೆದ್ದಾರಿ ಪಕ್ಕದಲ್ಲಿ ಪತ್ತೆಯಾಗಿದ್ದು ನೋಡಿದರೆ, ಈ ಚಿಪ್ಪುಹಂದಿಯೂ ಕಳ್ಳಸಾಗಣೆಯಾಗಿರುವ ಸಾಧ್ಯತೆ ಇದೆ’ ಎಂದರು.</p>.<p>*</p>.<p>ಚಿಪ್ಪುಹಂದಿಗಳು ಅಪಾಯದ ಅಂಚಿನಲ್ಲಿರುವ ಜೀವಿಗಳು. ಇವುಗಳ ಸಂತತಿ ನಶಿಸುತ್ತಿದೆ. ಈ ಜೀವಿಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು.<br /><em><strong>-ಪ್ರಸನ್ನ ಕುಮಾರ್, ಗೌರವ ವನ್ಯಜೀವಿ ಪರಿಪಾಲಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಂಚೆಪಾಳ್ಯದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಚಿಪ್ಪುಹಂದಿಯೊಂದನ್ನು ಬಿಬಿಎಂಪಿ ವನ್ಯಜೀವಿ ರಕ್ಷಕರು ಮಂಗಳವಾರ ತಡರಾತ್ರಿ ರಕ್ಷಣೆ ಮಾಡಿದ್ದಾರೆ.</p>.<p>‘ಹೆದ್ದಾರಿ ಪಕ್ಕದಲ್ಲಿ ವಿಚಿತ್ರ ಜೀವಿ ಕಂಡು ಬಂದಿದೆ ಎಂದು ಅಂಚೆಪಾಳ್ಯದಿಂದ ಬಿಬಿಎಂಪಿ ಸಹಾಯವಾಣಿಗೆ ಯಾರೋ ಮಂಗಳವಾರ ರಾತ್ರಿ ಕರೆ ಮಾಡಿದ್ದರು. ರಾತ್ರಿ 12.30ರ ಸುಮಾರಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಈ ಚಿಪ್ಪುಹಂದಿ ಪತ್ತೆಯಾಯಿತು. ಅದಕ್ಕೆ ಸುಮಾರು ಎರಡೂ ವರ್ಷವಾಗಿರಬಹುದು. ಅದು ಸುಮಾರು 6 ಕೆ.ಜಿ. ತೂಗುತ್ತಿತ್ತು. ಅದು ಆರೋಗ್ಯವಾಗಿಯೇ ಇತ್ತು. ಹಾಗಾಗಿ ಅದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದ್ದೇವೆ’ ಎಂದು ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಚಿಪ್ಪುಹಂದಿಗಳು ಗೆದ್ದಲುಗಳನ್ನು ತಿಂದು ಬದುಕುವ ಜೀವಿಗಳು. ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಹೆಚ್ಚಿದಂತೆ ನಗರದಲ್ಲಿ ಹುತ್ತಗಳು ನಶಿಸಿವೆ. ಕಾಂಕ್ರೀಟ್ ಕಾಡಿನಿಂದಲೇ ತುಂಬಿರುವ ಬೆಂಗಳೂರಿನಲ್ಲಿ ಈ ಜೀವಿಗಳು ಬದುಕುವುದು ಕಷ್ಟ’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ಚಿಪ್ಪುಗಳಿಗಾಗಿ ಈ ಜೀವಿಗಳ ಕಳ್ಳಸಾಗಣೆ ಜಾಸ್ತಿ ಆಗಿದೆ. ನಗರದ ಪೊಲೀಸರೂ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಚಿಪ್ಪುಹಂದಿ ಚಿಪ್ಪುಗಳನ್ನು ವಶಪಡಿಸಿಕೊಂಡಿದ್ದರು. ಹೆದ್ದಾರಿ ಪಕ್ಕದಲ್ಲಿ ಪತ್ತೆಯಾಗಿದ್ದು ನೋಡಿದರೆ, ಈ ಚಿಪ್ಪುಹಂದಿಯೂ ಕಳ್ಳಸಾಗಣೆಯಾಗಿರುವ ಸಾಧ್ಯತೆ ಇದೆ’ ಎಂದರು.</p>.<p>*</p>.<p>ಚಿಪ್ಪುಹಂದಿಗಳು ಅಪಾಯದ ಅಂಚಿನಲ್ಲಿರುವ ಜೀವಿಗಳು. ಇವುಗಳ ಸಂತತಿ ನಶಿಸುತ್ತಿದೆ. ಈ ಜೀವಿಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು.<br /><em><strong>-ಪ್ರಸನ್ನ ಕುಮಾರ್, ಗೌರವ ವನ್ಯಜೀವಿ ಪರಿಪಾಲಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>