ನೆನ್ನೆಯವರೆಗು ನಿರ್ವಹಣೆಯಿಲ್ಲದೆ ಅವ್ಯವಸ್ಥೆಯಿಂದ ಕೂಡಿದ ಉದ್ಯಾನವು ಇಂದು ಸ್ವಚ್ಛತಾ ಕಾರ್ಯದ ಫಲವಾಗಿ ನಳನಳಿಸುತ್ತಿತ್ತು. ‘ಮೆಟ್ರೊ’ ಪ್ರಕಟಿಸಿದ ‘ಗಬ್ಬು ನಾರುವ ಉದ್ಯಾನಗಳು’ (ಮಂಗಳವಾರ 30 ಸಂಚಿಕೆ) ಎಂಬ ಶೀರ್ಷಿಕೆಯಡಿ, ಎಸ್.ಸಜ್ಜನ್ರಾವ್ ಸರ್ಕಲ್ನಲ್ಲಿರುವ ವಿಭಾಗ 47, ವಿವಿಪುರಂ ಉದ್ಯಾನದ ಸ್ಥಿತಿಯ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ವರದಿಯ ಪರಿಣಾಮ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ತಾವೇ ನಿಂತು ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯದ ಜೊತೆಗೆ ಸೂಕ್ತ ಪರಿಹಾರದ ಕ್ರಮಗಳನ್ನು ಕೈಗೊಂಡಿದ್ದಾರೆ. ಉದ್ಯಾನಕ್ಕೆ ‘ಮೆಟ್ರೊ’ ಖುದ್ದು ಭೇಟಿ ನೀಡಿದಾಗ ಕಂಡಿದ್ದು ಇಷ್ಟು.