ಇದೇ ಸಂದರ್ಭದಲ್ಲಿ 2019-20 ಮತ್ತು 20-21ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿಗಳನ್ನು ಡಾ. ಎಚ್.ಎಸ್. ಅನುಪಮಾ, ಡಾ. ಎಚ್.ಎಸ್. ಮೋಹನ್, ಡಾ. ಶಶಿಕಲಾ ಕೃಷ್ಣಮೂರ್ತಿ ಮತ್ತು ಡಾ. ವಿನೋದ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಯಿತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎಂ. ಜಯಕರ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಅಧ್ಯಕ್ಷ ಡಾ. ಎಂ. ವೆಂಕಟಾಚಲಪತಿ, ಐಎಂಎ–ಕೆಎಸ್ಬಿ ಕನ್ನಡ ವೈದ್ಯ ಬರಹಗಾರರ ಬಳಗದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಎಂ. ಉಳ್ತೂರು, ಐಎಂಎ ರಾಜ್ಯ ಶಾಖೆಯ ಗೌರವ ರಾಜ್ಯ ಕಾರ್ಯದರ್ಶಿ ಡಾ. ಎಸ್. ಎಂ. ಪ್ರಸಾದ್, ಡಾ. ಲಕ್ಷ್ಮೀಪತಿ ಬಾಬು ಇದ್ದರು.