<p><strong>ನವದೆಹಲಿ:</strong> ಸೋಫಾ ಮತ್ತು ಹಾಸಿಗೆ ತ್ಯಾಜ್ಯದ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಕೆಲವು ವೃತ್ತಿಪರರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದರು.</p>.<p>ತಮ್ಮ ‘ಮನದ ಮಾತು’ ರೇಡಿಯೊ ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶದ ವಿವಿಧ ಭಾಗಗಳಲ್ಲಿ ಹಲವು ಗುಂಪುಗಳು ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಡೆಸಿರುವ ಪ್ರಯತ್ನಗಳನ್ನು ಉಲ್ಲೇಖಿಸಿದರು.</p>.<p>‘ಬೆಂಗಳೂರಿನಲ್ಲಿ ಸೋಫಾ ತ್ಯಾಜ್ಯ ದೊಡ್ಡ ಸಮಸ್ಯೆ ಆಗಿದೆ. ಕೆಲವು ವೃತ್ತಿಪರರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಮ್ಮದೇ ಆದ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿಯೇ ಹಲವರು ಒಟ್ಟುಗೂಡಿದ್ದಾರೆ’ ಎಂದು ಮೋದಿ ಹೇಳಿದರು.</p>.<p>ಇದೇ ಸಂದರ್ಭ ಅರುಣಾಚಲಪ್ರದೇಶದ ಜನರ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.</p>.<p>ಇಟಾನಗರದ ಕೆಲವು ಪ್ರದೇಶಗಳಲ್ಲಿ ಕಸದ ರಾಶಿಯೇ ಬೀಳುತ್ತಿತ್ತು. ಇದನ್ನು ಗಮನಿಸಿದ ಯುವಕರ ಗುಂಪು ಸ್ವಚ್ಛತೆಗೆ ಮುಂದಾಯಿತು. ಆ ಪ್ರದೇಶ ಸ್ವಚ್ಛವಾದೊಡನೆ ಇಡೀ ನಗರಕ್ಕೆ ತನ್ನ ಅಭಿಯಾನ ವಿಸ್ತರಿಸಿತು. ಇದು ಅಕ್ಕಪಕ್ಕದ ನಗರಗಳಿಗೂ ವಿಸ್ತರಣೆಗೊಂಡಿತು. ಇಟಾನಗರವು ಸೇರಿದಂತೆ ನಹರ್ಲಗುನ್, ದೋಯಿಮುಖ್, ಸೆಪ್ಪಾ, ಪಾಲಿನ್, ಪಾಸಿಘಾಟ್ನಲ್ಲೂ ಸ್ವಚ್ಛತೆ ಕೈಗೊಂಡಿದ್ದರಿಂದ 11 ಲಕ್ಷ ಕೆ.ಜಿ ಕಸ ಸಂಗ್ರಹಗೊಂಡಿತು ಎಂದು ಹೇಳಿದರು.</p>.<p>ಅಸ್ಸಾಂನ ನಾಗೋನ್ನ ಜನರು ತಮ್ಮೂರಿನ ಹಳೆಯ ಬೀದಿಗಳ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಬೀದಿಗಳನ್ನು ಇಲ್ಲಿನ ಜನರೇ ಸ್ವಚ್ಛಗೊಳಿಸುತ್ತಿದ್ದಾರೆ. ಈ ಕಾಯಕಕ್ಕೆ ಹಲವರು ಕೈಜೋಡಿಸಿದ್ದು, ಇಲ್ಲಿನ ಬೀದಿಗಳು ಸ್ವಚ್ಛವಾಗಿವೆ ಎಂದು ಮೋದಿ ತಮ್ಮ ಮನದ ಮಾತಿನಲ್ಲಿ ಪ್ರಸ್ತಾಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸೋಫಾ ಮತ್ತು ಹಾಸಿಗೆ ತ್ಯಾಜ್ಯದ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಕೆಲವು ವೃತ್ತಿಪರರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದರು.</p>.<p>ತಮ್ಮ ‘ಮನದ ಮಾತು’ ರೇಡಿಯೊ ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶದ ವಿವಿಧ ಭಾಗಗಳಲ್ಲಿ ಹಲವು ಗುಂಪುಗಳು ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಡೆಸಿರುವ ಪ್ರಯತ್ನಗಳನ್ನು ಉಲ್ಲೇಖಿಸಿದರು.</p>.<p>‘ಬೆಂಗಳೂರಿನಲ್ಲಿ ಸೋಫಾ ತ್ಯಾಜ್ಯ ದೊಡ್ಡ ಸಮಸ್ಯೆ ಆಗಿದೆ. ಕೆಲವು ವೃತ್ತಿಪರರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಮ್ಮದೇ ಆದ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿಯೇ ಹಲವರು ಒಟ್ಟುಗೂಡಿದ್ದಾರೆ’ ಎಂದು ಮೋದಿ ಹೇಳಿದರು.</p>.<p>ಇದೇ ಸಂದರ್ಭ ಅರುಣಾಚಲಪ್ರದೇಶದ ಜನರ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.</p>.<p>ಇಟಾನಗರದ ಕೆಲವು ಪ್ರದೇಶಗಳಲ್ಲಿ ಕಸದ ರಾಶಿಯೇ ಬೀಳುತ್ತಿತ್ತು. ಇದನ್ನು ಗಮನಿಸಿದ ಯುವಕರ ಗುಂಪು ಸ್ವಚ್ಛತೆಗೆ ಮುಂದಾಯಿತು. ಆ ಪ್ರದೇಶ ಸ್ವಚ್ಛವಾದೊಡನೆ ಇಡೀ ನಗರಕ್ಕೆ ತನ್ನ ಅಭಿಯಾನ ವಿಸ್ತರಿಸಿತು. ಇದು ಅಕ್ಕಪಕ್ಕದ ನಗರಗಳಿಗೂ ವಿಸ್ತರಣೆಗೊಂಡಿತು. ಇಟಾನಗರವು ಸೇರಿದಂತೆ ನಹರ್ಲಗುನ್, ದೋಯಿಮುಖ್, ಸೆಪ್ಪಾ, ಪಾಲಿನ್, ಪಾಸಿಘಾಟ್ನಲ್ಲೂ ಸ್ವಚ್ಛತೆ ಕೈಗೊಂಡಿದ್ದರಿಂದ 11 ಲಕ್ಷ ಕೆ.ಜಿ ಕಸ ಸಂಗ್ರಹಗೊಂಡಿತು ಎಂದು ಹೇಳಿದರು.</p>.<p>ಅಸ್ಸಾಂನ ನಾಗೋನ್ನ ಜನರು ತಮ್ಮೂರಿನ ಹಳೆಯ ಬೀದಿಗಳ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಬೀದಿಗಳನ್ನು ಇಲ್ಲಿನ ಜನರೇ ಸ್ವಚ್ಛಗೊಳಿಸುತ್ತಿದ್ದಾರೆ. ಈ ಕಾಯಕಕ್ಕೆ ಹಲವರು ಕೈಜೋಡಿಸಿದ್ದು, ಇಲ್ಲಿನ ಬೀದಿಗಳು ಸ್ವಚ್ಛವಾಗಿವೆ ಎಂದು ಮೋದಿ ತಮ್ಮ ಮನದ ಮಾತಿನಲ್ಲಿ ಪ್ರಸ್ತಾಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>