ಲಾಕ್ಡೌನ್ ಘೋಷಣೆಯಾದ ಬಳಿಕ ಕಾಡುಪ್ರಾಣಿಗಳ ಕಳ್ಳಬೇಟೆ ಹೆಚ್ಚಾಗಿದೆ. ಬೆಂಗಳೂರು ನಗರ ಜಿಲ್ಲೆಯ ಅರಣ್ಯ ಇಲಾಖೆಯ ತಂಡ ಸೂಲಿಕೆರೆ ಸಮೀಪ ಮೂರು ದಿನಗಳ ಹಿಂದೆ ಕಾಡುಪ್ರಾಣಿಗಳಿಗೆ ಉರುಳು ಇಡುತ್ತಿದ್ದ ತಾವರೆಕೆರೆ ಹೋಬಳಿಯ ಗಿಡದಪಾಳ್ಯ ನಿವಾಸಿಗಳಾದ ತಿಪ್ಪಣ್ಣ (31), ನಾಗರಾತ (33) ಹಾಗೂ ನಾಗಪ್ಪ (40) ಅವರನ್ನು ಉರುಳು ಸಮೇತ ಬಂಧಿಸಿತ್ತು.