‘ಗಸ್ತಿನಲ್ಲಿದ್ದ ಶ್ರೀನಿವಾಸ್ ಮತ್ತು ಬಾಬಾ ಸುಬಾನ್, ಆರೋಪಿಗಳ ವರ್ತನೆಯನ್ನು ಪ್ರಶ್ನಿಸಿದ್ದರು. ಸ್ಥಳದಿಂದ ಹೊರಟು ಹೋಗುವಂತೆ ಸೂಚಿಸಿದ್ದರು. ಸ್ಥಳದಿಂದ ಹೊರಟಂತೆ ನಟಿಸಿದ್ದ ಆರೋಪಿಗಳು, ಸಮೀಪದ ಜಂಕ್ಷನ್ ಬಳಿ ಪುನಃ ಕಾರು ನಿಲ್ಲಿಸಿಕೊಂಡು ಚೀರಾಡುತ್ತಿದ್ದರು. ಅಲ್ಲಿಗೂ ಹೋದ ಪೊಲೀಸರು, ಎಚ್ಚರಿಕೆ ನೀಡಿದ್ದರು.’