ಮಹತ್ವದ ಸುದ್ದಿ: ಮಹೇಶ್ ಅವರನ್ನು ವಿರಾಜಪೇಟೆಯಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದ ಸಿಐಡಿ ಪೊಲೀಸರು, ಬುಧವಾರ ನಾಲ್ಕು ತಾಸು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು. ‘ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಅಂತಹದ್ದೊಂದು ಪತ್ರ ಹೊರಬಿದ್ದಿತ್ತು. ಆಗ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ದೊಡ್ಡ ಚಳವಳಿಯೇ ನಡೆಯುತ್ತಿತ್ತು. ಪತ್ರದಲ್ಲಿ ಕುತೂಹಲಕಾರಿ ಅಂಶಗಳು ಇದ್ದುದರಿಂದ ಅದು ಮಹತ್ವದ ಸುದ್ದಿಯಾಗಿತ್ತು. ಹೀಗಾಗಿ, ಪ್ರಕಟಿಸಿದ್ದೆ’ ಎಂದೂ ಮಹೇಶ್ ಹೇಳಿರುವುದಾಗಿ ತಿಳಿದುಬಂದಿದೆ.