ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರ ಬರೆದಿರುವ ಅವರು, ‘ವಹ್ನಿಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಶಂಭುಕುಲ ಕ್ಷತ್ರಿಯ, ಅಗ್ನಿವನ್ನಿ, ಧರ್ಮರಾಜ ಕಾಪು, ತಿಗಳ, ಪಳ್ಳಿ, ಪನ್ನುಗೊಂಡರ್, ವನ್ನಿಯಾರ್, ಪಡಿಯಾಚಿ, ತಿಗ್ಲರ್... ಹೀಗೆ ಉಪ ಜಾತಿಗಳನ್ನು ಈ ಸಮುದಾಯ ಒಳಗೊಂಡಿದೆ. ಕರ್ನಾಟಕದ ಮೂಲ ನಿವಾಸಿಗಳಲ್ಲಿ ತಿಗಳ ಸಮುದಾಯವೂ ಒಂದು’ ಎಂದು ವಿವರಿಸಿದ್ದಾರೆ.