ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೆ.ದೀಪಶ್ರೀ, ‘ನಿಗಮವು 2021-22ನೇ ಸಾಲಿನಲ್ಲಿ ‘ಆರ್ಯ ವೈಶ್ಯ ಆಹಾರ ವಾಹಿನಿ’ ಯೋಜನೆಯಡಿ ಫುಡ್ ಟ್ರಕ್ ಸೌಲಭ್ಯ, ‘ವಾಸವಿ ಜಲಶಕ್ತಿ ಯೋಜನೆ’ಯಡಿ ಕೊಳವೆ ಬಾವಿ ಕೊರೆಸಲು ಸಾಲ, ‘ಜ್ಞಾನ ಜ್ಯೋತಿ ಯೋಜನೆ’ಯಡಿ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಹಾಗೂ ಕೊರೊನಾದಿಂದ ಮೃತಪಟ್ಟ ಫಲಾನುಭವಿಗಳ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ’ ಎಂದು ಹೇಳಿದರು.