ಪೌರತ್ವದ ಪ್ರಶ್ನೆ ಕೇವಲ ಮುಸ್ಲಿಮರ ಸಮಸ್ಯೆ ಎಂಬಂತೆ ಬಿಂಬಿತವಾಗುತ್ತಿರುವುದನ್ನು ಅಲ್ಲಗಳೆಯುವ ವಿವೇಕವನ್ನೂ ಬೆಳೆಸಿಕೊಳ್ಳಬೇಕು. ಸಿಎಎ,ಎನ್ಆರ್ಸಿಯಿಂದ ಹಿಂದೂಗಳೂ ಅತಂತ್ರರಾಗುವ ವಾಸ್ತವವನ್ನು ತಿಳಿಸಬೇಕು. ಅಸ್ಸಾಂನಲ್ಲಿ ಅತಂತ್ರರಾದ 19 ಲಕ್ಷ ಜನರಲ್ಲಿ 14 ಲಕ್ಷ ಹಿಂದೂಗಳಿದ್ದರೆ, ಶ್ರೀಲಂಕಾದಿಂದ ಬಂದ 72 ಸಾವಿರ ಜನರು ನಿರಾಶ್ರಿತ ಕೇಂದ್ರಗಳಲ್ಲಿದ್ದು, ಇವರೆಲ್ಲ ಪೌರತ್ವ ವಂಚಿತರಾಗುವ ಅಪಾಯವಿದೆ. ಟಿಬೆಟ್ನಿಂದ ಬಂದ 1.50 ಲಕ್ಷ ಜನರಿಗೂ ಇದೇ ಗತಿಯಾಗುತ್ತದೆ. ಹೊರಗಿನಿಂದ ಬಂದ ಮುಸ್ಲಿಮರು, ಹಿಂದೂ, ಬೌದ್ಧರಿಗೂ ಸಮಸ್ಯೆಯಾಗಲಿದೆ ಎಂದಿದ್ದಾರೆ.