ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಂಪೇಗೌಡರ ಕಾಲದ ಸ್ಮಾರಕ ರಕ್ಷಿಸಿ’

Last Updated 7 ಜುಲೈ 2020, 17:14 IST
ಅಕ್ಷರ ಗಾತ್ರ

ಬೆಂಗಳೂರು:‘ನಗರದಲ್ಲಿ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ‘ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿ’ ಒತ್ತಾಯಿಸಿದೆ.

‘ಕೆಂಪೇಗೌಡರ ಮನೆದೇವರ ಹೆಸರಿನಲ್ಲಿ ನಿರ್ಮಿಸಿರುವ ಕೆಂಪಾಂಬುದಿ ಕೆರೆಯ ದಕ್ಷಿಣಕ್ಕೆ ಗವಿಪುರ ಗ್ರಾಮದ 4 ಎಕರೆ ಆಸ್ತಿ ಸರ್ಕಾರಕ್ಕೆ ಸೇರಿದೆ. ಈ ಸ್ಥಳದಲ್ಲಿ ಬೆಂಗಳೂರಿನ ನಾಲ್ಕು ಗಡಿಗೋಪುರಗಳ ಪೈಕಿ ಒಂದು ಗೋಪುರವಿದೆ. ಈ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ’ ಎಂದು ಸಮಿತಿಯ ಮಾಜಿ ಉಪಾಧ್ಯಕ್ಷ ಸಿ. ಕಾಳಯ್ಯ ಹೇಳಿದ್ದಾರೆ.

‘ಕೆಂಪಾಂಬುದಿ ಕೆರೆಯ ನಿರ್ವಹಣೆಯೂ ಸಮರ್ಪಕವಾಗಿಲ್ಲ. ಕೆರೆಯ ದಕ್ಷಿಣಕ್ಕೆ ಬಂಡಿ ಮಹಾಕಾಳಿ ದೇವರ ಹೆಸರಿನಲ್ಲಿ ಟ್ರಸ್ಟ್‌ ನಿರ್ಮಾಣ ಮಾಡಿ, ಈ ಆಸ್ತಿ ನಮಗೆ ಸೇರಬೇಕು ಎಂದು ಫಲಕ ಹಾಕಲಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಈ ಫಲಕ ತೆಗೆಸಿ, ಸರ್ಕಾರದ ಜಾಗ ರಕ್ಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT