ಕೋವಿಡ್ ಕಾರಣಕ್ಕೆ ಬೆಂಗಳೂರು ವಿಶ್ವ ವಿದ್ಯಾನಿಲಯವನ್ನು ಸಂಪರ್ಕಿಸುವ ರಸ್ತೆಗಳಿಗೆ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿತ್ತು. ಹೀಗಾಗಿ ಈ ಮರಿಯಪ್ಪನ ಪಾಳ್ಯದಿಂದ ಮೂಡಲಪಾಳ್ಯ, ವಿಜಯನಗರ, ಪ್ರಶಾಂತ ನಗರದತ್ತ ತಮ್ಮ ದೈನಂದಿನ ಕಾರ್ಯಗಳಿಗೆ ತೆರಳುವ ಜನರು ಮೈಸೂರು ರಸ್ತೆಯ ಮುಖಾಂತರ ಅಥವಾ ರಿಂಗ್ ರಸ್ತೆಯ ಮುಖಾಂತರ ಓಡಾಡುವುದು ಅನಿವಾರ್ಯವಾಗಿತ್ತು. ರಿಂಗ್ ರಸ್ತೆಯಲ್ಲೂ ಕೆಲ ದಿನಗಳಿಂದ ವೈಟ್ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬದಲಿ ರಸ್ತೆ ಇಲ್ಲದ ಕಾರಣ ಸಂಚಾರ ದಟ್ಟಣೆಯೂ ಕಂಡು ಬರುತ್ತಿತ್ತು. ನೂರಾರು ಸ್ಥಳೀಯರು ಬಿಜೆಪಿ ಮುಖಂಡ ಎಸ್.ಟಿ. ಪ್ರಕಾಶ್ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರಸ್ತೆ ಸಂಚಾರಕ್ಕೆ ಅವಕಾಶ ನೀಡುವಂತೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.