ಹೊರಮಾವು ಅಗರ ಗ್ರಾಮದಲ್ಲಿ ರಸ್ತೆ ನಿರ್ಮಾಣ ವಿಚಾರಕ್ಕೆ ಬೆನ್ಸನ್ಟೌನ್ ನಿವಾಸಿಯೊಬ್ಬರ ವಿರುದ್ಧ ಬಿಎಂಟಿಎಫ್ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಮುಕ್ತಾಯ ಆಗಿರುವ ಬಗ್ಗೆ ಹಿಂದಿನ ಇನ್ಸ್ಪೆಕ್ಟರ್ ತಿಳಿಸಿದ್ದರೂ, ಚಾಲ್ತಿಯಲ್ಲಿದೆ ಎಂದು ಇದೇ ಠಾಣೆಯ ಕಾನ್ಸ್ಟೆಬಲ್ ಶ್ರೀನಿವಾಸ್ ಹೇಳಿದ್ದರು. ಮುಕ್ತಾಯಗೊಳಿಸಲುಇನ್ಸ್ಪೆಕ್ಟರ್ ಪರವಾಗಿ ₹1 ಲಕ್ಷ ಲಂಚದ ಬೇಡಿಕೆಯನ್ನು ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.