‘ತಳ ಸಮುದಾಯದವರ ಕಲ್ಯಾಣಕ್ಕಾಗಿ ನಾನು ಶ್ರಮಿಸಿದೆ. ಸ್ತನ ಕ್ಯಾನ್ಸರ್ ಜಯಿಸಿದ ನಾನು, ಈ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದೆ. ಚೆನ್ನೈನಲ್ಲಿ ಸ್ನಾತಕೋತ್ತರ ಪದವಿ ಪಡೆದು, 1977ರಿಂದ 1997ರ ವರೆಗೆ ಬೆಂಗಳೂರಿನ ದಿ ಫ್ರಾಂಕ್ಆಂಥೋನಿ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದೆ. ನನ್ನ ಸಾಮಾಜಿಕ ಕಾರ್ಯಗಳನ್ನು ಗುರುತಿಸಿದ ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ, ಲೋಕಸಭೆಗೆ ನಾಮನಿರ್ದೇಶನ ಮಾಡಿದರು. ಇದರಿಂದಾಗಿ ಸಂಸತ್ತು ಪ್ರವೇಶಿಸುವ ಅವಕಾಶ ದೊರೆಯಿತು.ಎಲಿಜಬೆತ್ ಅವರು ಭಾರತಕ್ಕೆ ಭೇಟಿ ನೀಡಿದಾಗ, ಸಂಸತ್ತಿಗೆ ಅತಿಥಿಯಾಗಿ ಬಂದಿದ್ದರು’ ಎಂದರು.