ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೂ ಮೊದಲು ಮಳೆ ನೀರು ನೇರವಾಗಿ ಕೆರೆಗೆ ಹರಿದು ಬರುತ್ತಿತ್ತು. ಬಡಾವಣೆ ನಿರ್ಮಾಣದ ವೇಳೆ ರಾಜಕಾಲುವೆಯನ್ನು ಮುಚ್ಚಲಾಯಿತು. ಇದರಿಂದಾಗಿ, ಕೆರೆಗೆ ಮಳೆ ನೀರು ಸೇರುವುದು ನಿಂತಿತು. ಕೆರೆಯ ಆವರಣದಲ್ಲೆಲ್ಲಾ ಜೊಂಡು ತುಂಬಿಕೊಂಡು, ಗಿಡಗಂಟಿಗಳು ಬೆಳೆದಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆರೆ ಕೆಲವೇ ವರ್ಷಗಳಲ್ಲಿ ಸಂಪೂರ್ಣ ನಾಶವಾಗಲಿದೆ ಎಂದು ಶಾಂತರಾಜು ಎಚ್ಚರಿಸಿದರು.