ಯಲಹಂಕ:ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನಂ(97) ಶನಿವಾರ ಚೆನ್ನೈನಲ್ಲಿ ನಿಧನರಾದರು.
ರತ್ನಂ ಅವರು ಕಪ್ಪು ಬಿಳುಪು, ಭಲೇ ಜೋಡಿ, ಚದುರಂಗ, ಮನೆಕಟ್ಟಿ ನೋಡು, ಹೊಯ್ಸಳ, ಮಹಾತಪಸ್ವಿ ಸೇರಿದಂತೆ ಕನ್ನಡದ ಹಲವು ಸಿನಿಮಾ, ತೆಲುಗು, ತಮಿಳಿನ 70ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದರು. ಅವರು ರಾಗ ಸಂಯೋಜಿಸಿದ್ದ ‘ಬೆಳೆದಿದೆ ನೋಡಾ ಬೆಂಗಳೂರು ನಗರ’, ‘ಇಲ್ಲಿಗೆ ಋಣವು ತೀರಿತು’, ‘ಹೋಗದಿರೀ ಸೋದರರೆ’, ‘ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು’ ಮತ್ತಿತರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ.