<p><strong>ಬೆಂಗಳೂರು</strong>: ನಗರದ ಪಿಇಎಸ್ ವಿಶ್ವವಿದ್ಯಾಲಯವು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಸಹಯೋಗದಲ್ಲಿ ಆರ್–ಸ್ಯಾಟ್ ಉಪಗ್ರಹ ಸಿದ್ಧಪಡಿಸಿದ್ದು, ಇದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇದೇ 28ಕ್ಕೆ ಉಡಾವಣೆಯಾಗಲಿದೆ.</p>.<p>ಇಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ ಮಾತನಾಡಿ, ‘2016ರಲ್ಲಿ ಪಿ-ಸ್ಯಾಟ್ ಉಪಗ್ರಹ ರೂಪಿಸಿ, ಇಸ್ರೊಗೆ ಹಸ್ತಾಂತರ ಮಾಡಿದ್ದೇವು. ಇದರ ಯಶಸ್ಸಿನಿಂದ ಡಿಆರ್ಡಿಒ ಅವರು ಉಪಗ್ರಹ ರೂಪಿಸಿಕೊಡುವಂತೆ ಮನವಿ ಮಾಡಿದ್ದರು. ನಮ್ಮಲ್ಲಿನ ವಿಜ್ಞಾನಿ ಡಾ. ಶಾಂಬಶಿವ ರಾವ್ ಮಾರ್ಗದರ್ಶನದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿಮೂರು ವರ್ಷದ ಅವಧಿಯಲ್ಲಿ ಈ ಉಪಗ್ರಹವನ್ನು ವಿನ್ಯಾಸ ಮಾಡಿದ್ದಾರೆ. ಇದನ್ನು ಡಿಆರ್ಡಿಒಗೆ ಹಸ್ತಾಂತರ ಮಾಡಲಾಗುತ್ತದೆ. ಸಮುದ್ರ ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಹಡಗುಗಳ ಚಲನೆಯ ಮೇಲೆ ಇದು ನಿಗಾ ಇಡಲಿದೆ’ ಎಂದು ತಿಳಿಸಿದರು.</p>.<p>‘ಮೈಕ್ರೊ ಉಪಗ್ರಹವಾಗಿರುವ ಆರ್-ಸ್ಯಾಟ್ 15 ಕೆ.ಜಿ. ತೂಕವಿದ್ದು, 45 ವಾಟ್ ಸೌರಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಮುದ್ರದಲ್ಲಿ ಸಾಗುವ ನೌಕೆಗಳ ಮೇಲೆ ಈ ಉಪಗ್ರಹ ನಿಗಾ ಇರಿಸಲಿದೆ. ನೌಕೆಗಳಲ್ಲಿರುವ ‘ಸ್ವಯಂ ಪತ್ತೆ ಸಾಧನ’ದ ತರಂಗ ಗ್ರಹಿಸಿ ಕೇಂದ್ರಕ್ಕೆ ರವಾನಿಸುತ್ತದೆ. ಇದಕ್ಕ ಡಿಆರ್ಡಿಒ ₹ 2.2 ಕೋಟಿ ಧನಸಹಾಯ ನೀಡಿದೆ’ ಎಂದು ವಿವರಿಸಿದರು.</p>.<p><strong>2 ವರ್ಷ ಆಯಸ್ಸು</strong>: ವಿಜ್ಞಾನಿ ಡಾ. ಸಾಂಬಶಿವ ರಾವ್ ಮಾತನಾಡಿ, ‘ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿಯೇ ಇದನ್ನು ವಿನ್ಯಾಸ ಮಾಡಲಾಗಿದೆ. ಈ ಉಪಗ್ರಹದ ಪ್ರಾಯೋಗಿಕ ಪರೀಕ್ಷೆಗಳು ನಡೆದಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಉಡಾವಣೆಗೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಇದರ ಆಯಸ್ಸು ಕನಿಷ್ಠ ಎರಡು ವರ್ಷ ಎಂದು ಲೆಕ್ಕ ಹಾಕಲಾಗಿದೆ. ಸಮುದ್ರ ಪ್ರದೇಶಗಳಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆ ಮಾಡಲು ಇದು ಸಹಕಾರಿ’ ಎಂದು ತಿಳಿಸಿದರು.</p>.<p>‘ಪ್ರತಿ ಹಡಗಿನ ಚಲನವಲನದ ಮಾಹಿತಿಯನ್ನು ಒದಗಿಸಲಿದೆ. ಸೋಲಾರ್ ಫಲಕಗಳು, ಬ್ಯಾಟರಿ, ಆಂಟೇನಾ ಸೇರಿದಂತೆ ವಿವಿಧ ಉಪಕರಣಗಳನ್ನು ಒಳಗೊಂಡಿದೆ. ಉಡಾವಣೆಯಾದ ಒಂದೂವರೆ ಗಂಟೆಯಲ್ಲಿ ಉಪಗ್ರಹವು ಕಕ್ಷೆ ಸೇರಲಿದೆ. ಒಂದು ದಿನದ ಬಳಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ’ ಎಂದು ಹೇಳಿದರು.</p>.<p class="Briefhead"><strong>ಉಪಗ್ರಹ ಸಿದ್ಧಗೊಳಿಸಿದ ತಂಡ</strong><br />* ಡಾ. ಶಾಂಬಶಿವ ರಾವ್<br />* ಡಾ.ಜಿ. ನಾಗೇಂದ್ರ ರಾವ್<br />* ಡಾ.ಎಸ್.ವಿ. ವೇಣುಗೋಪಾಲ್<br />* ಡಾ.ವಿ. ಕೇಶವ್ ರಾಜು<br />* ಪ್ರೊ.ಸಿ. ಬಂಗಾರ ರಾಜು<br />* ಪ್ರೊ.ಎಸ್. ನಾಗಭೂಷಣಮ್<br />* ಪ್ರೊ. ಮಹೇಂದ್ರ ನಾಯಕ್<br />* ಪ್ರೊ. ಪ್ರಿಯಾಂಕಾ ಅಗರ್ವಾಲ್<br />* ಯೋಗೇಶ್ ಎಂ.<br />* ಪರ್ವೇಜ್ ಮಹಮ್ಮದ್<br />* ಕಾವ್ಯಶ್ರೀ<br />* ಅಜಿತ್ ಕುಮಾರ್<br />* ಮಹಾಂತೇಶ್<br />* ಅಬ್ದುಲ್<br />* ಅಭಿರಾಮಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಪಿಇಎಸ್ ವಿಶ್ವವಿದ್ಯಾಲಯವು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಸಹಯೋಗದಲ್ಲಿ ಆರ್–ಸ್ಯಾಟ್ ಉಪಗ್ರಹ ಸಿದ್ಧಪಡಿಸಿದ್ದು, ಇದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇದೇ 28ಕ್ಕೆ ಉಡಾವಣೆಯಾಗಲಿದೆ.</p>.<p>ಇಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ ಮಾತನಾಡಿ, ‘2016ರಲ್ಲಿ ಪಿ-ಸ್ಯಾಟ್ ಉಪಗ್ರಹ ರೂಪಿಸಿ, ಇಸ್ರೊಗೆ ಹಸ್ತಾಂತರ ಮಾಡಿದ್ದೇವು. ಇದರ ಯಶಸ್ಸಿನಿಂದ ಡಿಆರ್ಡಿಒ ಅವರು ಉಪಗ್ರಹ ರೂಪಿಸಿಕೊಡುವಂತೆ ಮನವಿ ಮಾಡಿದ್ದರು. ನಮ್ಮಲ್ಲಿನ ವಿಜ್ಞಾನಿ ಡಾ. ಶಾಂಬಶಿವ ರಾವ್ ಮಾರ್ಗದರ್ಶನದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿಮೂರು ವರ್ಷದ ಅವಧಿಯಲ್ಲಿ ಈ ಉಪಗ್ರಹವನ್ನು ವಿನ್ಯಾಸ ಮಾಡಿದ್ದಾರೆ. ಇದನ್ನು ಡಿಆರ್ಡಿಒಗೆ ಹಸ್ತಾಂತರ ಮಾಡಲಾಗುತ್ತದೆ. ಸಮುದ್ರ ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಹಡಗುಗಳ ಚಲನೆಯ ಮೇಲೆ ಇದು ನಿಗಾ ಇಡಲಿದೆ’ ಎಂದು ತಿಳಿಸಿದರು.</p>.<p>‘ಮೈಕ್ರೊ ಉಪಗ್ರಹವಾಗಿರುವ ಆರ್-ಸ್ಯಾಟ್ 15 ಕೆ.ಜಿ. ತೂಕವಿದ್ದು, 45 ವಾಟ್ ಸೌರಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಮುದ್ರದಲ್ಲಿ ಸಾಗುವ ನೌಕೆಗಳ ಮೇಲೆ ಈ ಉಪಗ್ರಹ ನಿಗಾ ಇರಿಸಲಿದೆ. ನೌಕೆಗಳಲ್ಲಿರುವ ‘ಸ್ವಯಂ ಪತ್ತೆ ಸಾಧನ’ದ ತರಂಗ ಗ್ರಹಿಸಿ ಕೇಂದ್ರಕ್ಕೆ ರವಾನಿಸುತ್ತದೆ. ಇದಕ್ಕ ಡಿಆರ್ಡಿಒ ₹ 2.2 ಕೋಟಿ ಧನಸಹಾಯ ನೀಡಿದೆ’ ಎಂದು ವಿವರಿಸಿದರು.</p>.<p><strong>2 ವರ್ಷ ಆಯಸ್ಸು</strong>: ವಿಜ್ಞಾನಿ ಡಾ. ಸಾಂಬಶಿವ ರಾವ್ ಮಾತನಾಡಿ, ‘ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿಯೇ ಇದನ್ನು ವಿನ್ಯಾಸ ಮಾಡಲಾಗಿದೆ. ಈ ಉಪಗ್ರಹದ ಪ್ರಾಯೋಗಿಕ ಪರೀಕ್ಷೆಗಳು ನಡೆದಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಉಡಾವಣೆಗೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಇದರ ಆಯಸ್ಸು ಕನಿಷ್ಠ ಎರಡು ವರ್ಷ ಎಂದು ಲೆಕ್ಕ ಹಾಕಲಾಗಿದೆ. ಸಮುದ್ರ ಪ್ರದೇಶಗಳಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆ ಮಾಡಲು ಇದು ಸಹಕಾರಿ’ ಎಂದು ತಿಳಿಸಿದರು.</p>.<p>‘ಪ್ರತಿ ಹಡಗಿನ ಚಲನವಲನದ ಮಾಹಿತಿಯನ್ನು ಒದಗಿಸಲಿದೆ. ಸೋಲಾರ್ ಫಲಕಗಳು, ಬ್ಯಾಟರಿ, ಆಂಟೇನಾ ಸೇರಿದಂತೆ ವಿವಿಧ ಉಪಕರಣಗಳನ್ನು ಒಳಗೊಂಡಿದೆ. ಉಡಾವಣೆಯಾದ ಒಂದೂವರೆ ಗಂಟೆಯಲ್ಲಿ ಉಪಗ್ರಹವು ಕಕ್ಷೆ ಸೇರಲಿದೆ. ಒಂದು ದಿನದ ಬಳಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ’ ಎಂದು ಹೇಳಿದರು.</p>.<p class="Briefhead"><strong>ಉಪಗ್ರಹ ಸಿದ್ಧಗೊಳಿಸಿದ ತಂಡ</strong><br />* ಡಾ. ಶಾಂಬಶಿವ ರಾವ್<br />* ಡಾ.ಜಿ. ನಾಗೇಂದ್ರ ರಾವ್<br />* ಡಾ.ಎಸ್.ವಿ. ವೇಣುಗೋಪಾಲ್<br />* ಡಾ.ವಿ. ಕೇಶವ್ ರಾಜು<br />* ಪ್ರೊ.ಸಿ. ಬಂಗಾರ ರಾಜು<br />* ಪ್ರೊ.ಎಸ್. ನಾಗಭೂಷಣಮ್<br />* ಪ್ರೊ. ಮಹೇಂದ್ರ ನಾಯಕ್<br />* ಪ್ರೊ. ಪ್ರಿಯಾಂಕಾ ಅಗರ್ವಾಲ್<br />* ಯೋಗೇಶ್ ಎಂ.<br />* ಪರ್ವೇಜ್ ಮಹಮ್ಮದ್<br />* ಕಾವ್ಯಶ್ರೀ<br />* ಅಜಿತ್ ಕುಮಾರ್<br />* ಮಹಾಂತೇಶ್<br />* ಅಬ್ದುಲ್<br />* ಅಭಿರಾಮಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>