<p><strong>ಬೆಂಗಳೂರು:</strong> ನಿತ್ಯವೂ ಕಿರುಕುಳ ನೀಡುತ್ತಿದ್ದಾನೆಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಿಸಿದ ಆರೋಪದಡಿ ಮಹಿಳೆ ಸೇರಿ ಮೂವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.</p>.<p>ಟಿನ್ ಫ್ಯಾಕ್ಟರಿ ಹಿಂಭಾಗದ ದೂರವಾಣಿ ನಗರದ ನಿವಾಸಿ ಲೋಕನಾಥ್ (48) ಕೊಲೆಯಾದ ವ್ಯಕ್ತಿ. ಅವರ ಪತ್ನಿ ಯಶೋಧಾ (40), ಆಕೆಯ ಸ್ನೇಹಿತರಾದ ವಿಜಿನಾಪುರದ ಎಂ. ಮುನಿರಾಜು (33), ಕಸ್ತೂರಿನಗರದ ಪಿ. ಪ್ರಭು (27) ಬಂಧಿತರು.</p>.<p>‘ಬೈಯಪ್ಪನಹಳ್ಳಿ ಹಾಗೂ ಚನ್ನಸಂದ್ರ ರೈಲು ನಿಲ್ದಾಣಗಳ ನಡುವಿನ ಹಳಿ ಮೇಲೆ ಮೃತದೇಹ ಸಿಕ್ಕಿತ್ತು. ಅದರ ತನಿಖೆ ಕೈಗೊಂಡಾಗ ಕೊಲೆ ಎಂಬುದು ತಿಳಿಯಿತು. ಮೂವರು ಆರೋಪಿಗಳು ಸಿಕ್ಕಿಬಿದ್ದರು’ ಎಂದು ರೈಲ್ವೆ ಎಸ್ಪಿ ಡಿ.ಆರ್. ಸಿರಿಗೌರಿ ಹೇಳಿದರು.</p>.<p>‘ಕಾರ್ಮಿಕ ಲೋಕನಾಥ್, ಯಶೋಧಾ ಅವರನ್ನು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆಕೆ ಸಹ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಳು. ಮದ್ಯವ್ಯಸನಿಯಾಗಿದ್ದ ಲೋಕನಾಥ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಪತ್ನಿಗೆ ಹೊಡೆಯುವುದು, ಬೈಯುವುದು ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ.’</p>.<p>‘ಕಿರುಕುಳದಿಂದ ಬೇಸತ್ತ ಯಶೋಧಾ, ಪತಿಯನ್ನೇ ಕೊಲೆ ಮಾಡಿಸಲು ಮುಂದಾಗಿದ್ದಳು. ಸ್ನೇಹಿತ ಮುನಿರಾಜುವನ್ನು ಸಂಪರ್ಕಿಸಿ ಕೊಲೆ ಮಾಡುವಂತೆ ಹೇಳಿದ್ದರು’ ಎಂದೂ ತಿಳಿಸಿದರು.</p>.<p class="Subhead">ಮದ್ಯ ಕುಡಿಸಿ ಕೊಲೆ: ’ಲೋಕನಾಥ್ ಅವರಿಗೆ ಮೇ 15ರಂದು ಕರೆ ಮಾಡಿದ್ದ ಮುನಿರಾಜು ಹಾಗೂ ಪ್ರಭು, ಮದ್ಯದ ಪಾರ್ಟಿ ಮಾಡೋಣವೆಂದು ಕಸ್ತೂರಿನಗರದ ರೈಲ್ವೆ ಹಳಿ ಬಳಿ ಕರೆಸಿದ್ದರು. ಅಲ್ಲಿ ಲೋಕನಾಥ್ ಅವರಿಗೆ ಮದ್ಯ ಕುಡಿಸಿ, ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಂದಿದ್ದರು’ ಎಂದೂ ಸಿರಿಗೌರಿ ಹೇಳಿದರು.</p>.<p>‘ಕೊಲೆ ಎಂಬುದು ಯಾರಿಗೂ ಗೊತ್ತಾಗಬಾರದೆಂದು ಮೃತದೇಹವನ್ನು ಹಳಿ ಮೇಲೆ ಎಸೆದು ಹೋಗಿದ್ದರು. ಮೃತದೇಹ ನೋಡಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಿತ್ಯವೂ ಕಿರುಕುಳ ನೀಡುತ್ತಿದ್ದಾನೆಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಿಸಿದ ಆರೋಪದಡಿ ಮಹಿಳೆ ಸೇರಿ ಮೂವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.</p>.<p>ಟಿನ್ ಫ್ಯಾಕ್ಟರಿ ಹಿಂಭಾಗದ ದೂರವಾಣಿ ನಗರದ ನಿವಾಸಿ ಲೋಕನಾಥ್ (48) ಕೊಲೆಯಾದ ವ್ಯಕ್ತಿ. ಅವರ ಪತ್ನಿ ಯಶೋಧಾ (40), ಆಕೆಯ ಸ್ನೇಹಿತರಾದ ವಿಜಿನಾಪುರದ ಎಂ. ಮುನಿರಾಜು (33), ಕಸ್ತೂರಿನಗರದ ಪಿ. ಪ್ರಭು (27) ಬಂಧಿತರು.</p>.<p>‘ಬೈಯಪ್ಪನಹಳ್ಳಿ ಹಾಗೂ ಚನ್ನಸಂದ್ರ ರೈಲು ನಿಲ್ದಾಣಗಳ ನಡುವಿನ ಹಳಿ ಮೇಲೆ ಮೃತದೇಹ ಸಿಕ್ಕಿತ್ತು. ಅದರ ತನಿಖೆ ಕೈಗೊಂಡಾಗ ಕೊಲೆ ಎಂಬುದು ತಿಳಿಯಿತು. ಮೂವರು ಆರೋಪಿಗಳು ಸಿಕ್ಕಿಬಿದ್ದರು’ ಎಂದು ರೈಲ್ವೆ ಎಸ್ಪಿ ಡಿ.ಆರ್. ಸಿರಿಗೌರಿ ಹೇಳಿದರು.</p>.<p>‘ಕಾರ್ಮಿಕ ಲೋಕನಾಥ್, ಯಶೋಧಾ ಅವರನ್ನು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆಕೆ ಸಹ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಳು. ಮದ್ಯವ್ಯಸನಿಯಾಗಿದ್ದ ಲೋಕನಾಥ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಪತ್ನಿಗೆ ಹೊಡೆಯುವುದು, ಬೈಯುವುದು ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ.’</p>.<p>‘ಕಿರುಕುಳದಿಂದ ಬೇಸತ್ತ ಯಶೋಧಾ, ಪತಿಯನ್ನೇ ಕೊಲೆ ಮಾಡಿಸಲು ಮುಂದಾಗಿದ್ದಳು. ಸ್ನೇಹಿತ ಮುನಿರಾಜುವನ್ನು ಸಂಪರ್ಕಿಸಿ ಕೊಲೆ ಮಾಡುವಂತೆ ಹೇಳಿದ್ದರು’ ಎಂದೂ ತಿಳಿಸಿದರು.</p>.<p class="Subhead">ಮದ್ಯ ಕುಡಿಸಿ ಕೊಲೆ: ’ಲೋಕನಾಥ್ ಅವರಿಗೆ ಮೇ 15ರಂದು ಕರೆ ಮಾಡಿದ್ದ ಮುನಿರಾಜು ಹಾಗೂ ಪ್ರಭು, ಮದ್ಯದ ಪಾರ್ಟಿ ಮಾಡೋಣವೆಂದು ಕಸ್ತೂರಿನಗರದ ರೈಲ್ವೆ ಹಳಿ ಬಳಿ ಕರೆಸಿದ್ದರು. ಅಲ್ಲಿ ಲೋಕನಾಥ್ ಅವರಿಗೆ ಮದ್ಯ ಕುಡಿಸಿ, ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಂದಿದ್ದರು’ ಎಂದೂ ಸಿರಿಗೌರಿ ಹೇಳಿದರು.</p>.<p>‘ಕೊಲೆ ಎಂಬುದು ಯಾರಿಗೂ ಗೊತ್ತಾಗಬಾರದೆಂದು ಮೃತದೇಹವನ್ನು ಹಳಿ ಮೇಲೆ ಎಸೆದು ಹೋಗಿದ್ದರು. ಮೃತದೇಹ ನೋಡಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>