ಬೆಂಗಳೂರು: ನಗರದ ಹಲವೆಡೆ ಒಂದು ವಾರದಿಂದ ಸಂಜೆ, ರಾತ್ರಿ ವೇಳೆ ಧಾರಾಕಾರ ಮಳೆಯಾಗುತ್ತಿದೆ. ಮಳೆಯಾಗದೆ ಉಷ್ಣಾಂಶ ಏರಿಕೆಯಾಗಿ ಜನರು ಬಸವಳಿಯುವ ಸ್ಥಿತಿ ನಿರ್ಮಾಣವಾಗಿತ್ತು. ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಎದುರಾಗಿತ್ತು. ದುಬಾರಿ ಹಣ ನೀಡಿ ಜನರು ಟ್ಯಾಂಕರ್ನ ನೀರು ಖರೀದಿಸುತ್ತಿದ್ದರು.
ವಾರದಿಂದ ಸುರಿಯುತ್ತಿರುವ ಮಳೆ ವಾತಾವರಣ ತಂಪಾಗಿಸುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುವಂತಾಗಿದೆ.
ಶನಿವಾರ ತಡರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ. ಹೆಸರಘಟ್ಟದಲ್ಲಿ 9 ಸೆಂ.ಮೀ ಹಾಗೂ ಯಲಹಂಕದಲ್ಲಿ 8 ಸೆಂ.ಮೀ ಮಳೆ ಸುರಿದಿದೆ. ಯಲಹಂಕದ ನಾರ್ತ್ಹುಡ್ ಅಪಾರ್ಟ್ಮೆಂಟ್ ಒಳಗೆ ನೀರು ನುಗ್ಗಿತ್ತು. ರಸ್ತೆಗಳು ಜಲಾವೃತಗೊಂಡು ಜನರು ಪರದಾಡಿದರು.