<p><strong>ಬೆಂಗಳೂರು</strong>: ಮಳೆ ನೀರನ್ನು ಹೆಚ್ಚಾಗಿ ಸಂಗ್ರಹಿಸಲು ಕೆರೆಗಳ ವ್ಯವಸ್ಥೆಯನ್ನು ಉತ್ತಮಪಡಿಸಬೇಕಾದ ಅಗತ್ಯವಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದರು.</p><p>ಜನ ಅರ್ಬನ್ ಸ್ಪೇಸ್ ಫೌಂಡೇಷನ್ ಆಯೋಜಿಸಿದ್ದ ‘ಬೆಂಗಳೂರಿಗಾಗಿ ಪ್ರಕೃತಿ ಆಧಾರಿತ ಪರಿಹಾರಗಳು: ಒಳಚರಂಡಿ ವ್ಯವಸ್ಥೆಯ ಕುರಿತ ಪರಾಮರ್ಶೆಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.</p><p>ಚರಂಡಿಗಳಿಂದ ಕೊಳಚೆನೀರನ್ನು ಹೊರಗಿಡುವುದು, ಒಳಚರಂಡಿಯನ್ನು ಬಲಪಡಿಸುವುದು, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಸೃಷ್ಟಿಸಬೇಕಿದೆ. ಸಾರ್ವಜನಿಕರು ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.</p><p>‘ನಗರ ಒಳಚರಂಡಿ ವ್ಯವಸ್ಥೆಗಳ ಪುನರ್ ನಿರ್ಮಾಣ: ಬೆಂಗಳೂರಿನ ನಲ್ಲೂರಹಳ್ಳಿ ನಾಲಾ ಪುನಶ್ಚೇತನದಿಂದ ಕಲಿತ ಪಾಠಗಳು’ ಎಂಬ ಕರಡು ವರದಿಯನ್ನು ಮಹೇಶ್ವರ್ ರಾವ್ ಬಿಡುಗಡೆ ಮಾಡಿದರು.</p><p>ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಜನ ಅರ್ಬನ್ ಸ್ಪೇಸ್ ಫೌಂಡೇಷನ್ ನಿರ್ದೇಶಕಿ ನಿತ್ಯಾ ರಮೇಶ್, ಮರ್ಸಿಡಿಸ್–ಬೆನ್ಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇಂಡಿಯಾದ ಉಪಾಧ್ಯಕ್ಷೆ ಶ್ವೇತಾ ಪಾಂಡೆ, ನ್ಯಾಷನಲ್ ಇ-ಗವರ್ನನ್ಸ್ ಸರ್ವೀಸಸ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕಿ ಇ. ಪಿ. ನಿವೇದಿತಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಳೆ ನೀರನ್ನು ಹೆಚ್ಚಾಗಿ ಸಂಗ್ರಹಿಸಲು ಕೆರೆಗಳ ವ್ಯವಸ್ಥೆಯನ್ನು ಉತ್ತಮಪಡಿಸಬೇಕಾದ ಅಗತ್ಯವಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದರು.</p><p>ಜನ ಅರ್ಬನ್ ಸ್ಪೇಸ್ ಫೌಂಡೇಷನ್ ಆಯೋಜಿಸಿದ್ದ ‘ಬೆಂಗಳೂರಿಗಾಗಿ ಪ್ರಕೃತಿ ಆಧಾರಿತ ಪರಿಹಾರಗಳು: ಒಳಚರಂಡಿ ವ್ಯವಸ್ಥೆಯ ಕುರಿತ ಪರಾಮರ್ಶೆಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.</p><p>ಚರಂಡಿಗಳಿಂದ ಕೊಳಚೆನೀರನ್ನು ಹೊರಗಿಡುವುದು, ಒಳಚರಂಡಿಯನ್ನು ಬಲಪಡಿಸುವುದು, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಸೃಷ್ಟಿಸಬೇಕಿದೆ. ಸಾರ್ವಜನಿಕರು ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.</p><p>‘ನಗರ ಒಳಚರಂಡಿ ವ್ಯವಸ್ಥೆಗಳ ಪುನರ್ ನಿರ್ಮಾಣ: ಬೆಂಗಳೂರಿನ ನಲ್ಲೂರಹಳ್ಳಿ ನಾಲಾ ಪುನಶ್ಚೇತನದಿಂದ ಕಲಿತ ಪಾಠಗಳು’ ಎಂಬ ಕರಡು ವರದಿಯನ್ನು ಮಹೇಶ್ವರ್ ರಾವ್ ಬಿಡುಗಡೆ ಮಾಡಿದರು.</p><p>ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಜನ ಅರ್ಬನ್ ಸ್ಪೇಸ್ ಫೌಂಡೇಷನ್ ನಿರ್ದೇಶಕಿ ನಿತ್ಯಾ ರಮೇಶ್, ಮರ್ಸಿಡಿಸ್–ಬೆನ್ಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇಂಡಿಯಾದ ಉಪಾಧ್ಯಕ್ಷೆ ಶ್ವೇತಾ ಪಾಂಡೆ, ನ್ಯಾಷನಲ್ ಇ-ಗವರ್ನನ್ಸ್ ಸರ್ವೀಸಸ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕಿ ಇ. ಪಿ. ನಿವೇದಿತಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>