ಮದ್ಯ ಕುಡಿದು ಬಂದು ಜಗಳ: ‘ಮದ್ಯವ್ಯಸನಿಯಾದ ಆರೋಪಿ ಮಂಜುನಾಥ್, ನಿತ್ಯವೂ ಮದ್ಯ ಕುಡಿದು ಬಂದು ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದ. ಮದ್ಯ ಖರೀದಿಗಾಗಿ ಹಲವೆಡೆ ಸಾಲ ಮಾಡಿಕೊಂಡಿದ್ದ. ಮನೆ ಖರ್ಚಿಗೂ ಆರೋಪಿ ಹಣ ಕೊಡುತ್ತಿರಲಿಲ್ಲ. ಬೇರೆ ಮಹಿಳೆಯೊಂದಿಗೆ ಸಲುಗೆ ಇಟ್ಟುಕೊಂಡು ಆಕೆಯ ಮನೆಗೂ ಆಗಾಗ ಹೋಗಿ ಬರುತ್ತಿದ್ದ. ಇದು ಹೇಮಾ ಅವರಿಗೆ ಗೊತ್ತಾಗಿತ್ತು. ಆತನಿಗೆ ವಿಚ್ಛೇದನ ನೀಡಲು ಪತ್ನಿ ತೀರ್ಮಾನಿಸಿದ್ದರು’ ಎಂದು ಪೊಲೀಸರು ತಿಳಿಸಿದರು.