ಮಂಗಳವಾರ, 22 ಜುಲೈ 2025
×
ADVERTISEMENT
ADVERTISEMENT

ಅರ್ಚಕರ ವೇತನ ತಾರತಮ್ಯ ನಿವಾರಣೆಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ ಭರವಸೆ

Published : 19 ಜುಲೈ 2025, 15:28 IST
Last Updated : 19 ಜುಲೈ 2025, 15:28 IST
ಫಾಲೋ ಮಾಡಿ
Comments
ಸಿ ವರ್ಗದ ದೇವಾಲಯಗಳಿಗೆ ಆದಾಯವಿಲ್ಲ. ಇದರಿಂದಾಗಿ ಅರ್ಚಕರು ತಸ್ತಿಕ್‌ ಅವಲಂಬಿಸಬೇಕಾಗಿದೆ. ಅವರಿಗೂ ಗೌರವಧನ ಒದಗಿಸಬೇಕು
ರವಿ ಸುಬ್ರಮಣ್ಯ ಬಸವನಗುಡಿ ಶಾಸಕ
‘ಪ್ರತಿಮೆಗಳ ಮೂಲಕ ಭಗವಂತನ ಆರಾಧನೆ’
‘ದೇವಾಲಯಗಳು ಭಾರತೀಯ ಸಂಸ್ಕೃತಿಯ ರಕ್ಷಣೆಯ ಕೇಂದ್ರಬಿಂದುಗಳಾಗಿವೆ. ಪ್ರತಿಮೆಗಳ ಆರಾಧನೆ ಬಗ್ಗೆ ಹಿಂದೂ ಸಮಾಜದ ಕೆಲವರಲ್ಲಿ ಆಕ್ಷೇಪವಿದೆ. ವಸ್ತು ಸಂಗ್ರಹಾಲಯದಲ್ಲಿ ಸಾವಿರಾರು ಪ್ರತಿಮೆಗಳಿದ್ದರೂ ಅಲ್ಲಿಗೆ ಹೋಗಿ ಯಾರೂ ಪೂಜಿಸುವುದಿಲ್ಲ. ಆಗಮ ಶಾಸ್ತ್ರದ ಅನುಸಾರ ಪ್ರತಿಮೆಗಳಲ್ಲಿ ಭಗವಂತನ ಸನ್ನಿಧಾನ ತುಂಬಿದ ಬಳಿಕವೇ ಆರಾಧನೆ ನಡೆಯುತ್ತದೆ. ಆದ್ದರಿಂದ ಪ್ರತಿಮೆಗಳ ಮೂಲಕ ಭಗವಂತನನ್ನು ಆರಾಧಿಸುತ್ತಿದ್ದೇವೆ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
₹15 ಕೋಟಿ ಮೌಲ್ಯದ ಆಸ್ತಿ ಇಲಾಖೆಗೆ
ಮೈಸೂರಿನ ಜಿ.ಲಕ್ಷಮ್ಮ ಎಂಬುವರು ತಮ್ಮ ಒಡೆತನದಲ್ಲಿರುವ ಅಂದಾಜು ₹ 15 ಕೋಟಿ ಮೌಲ್ಯದ ಆಸ್ತಿಯನ್ನು ಮರಣದ ನಂತರ ಧಾರ್ಮಿಕ ದತ್ತಿ ಇಲಾಖೆಗೆ ನೀಡಲು ಮರಣ ಶಾಸನ ಮಾಡಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ಕಾರ್ಯಕ್ಕಾಗಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.  ಮೈಸೂರಿನ ಎ.ಎಸ್.ಗೋಪಾಲಕೃಷ್ಣ ಅಯ್ಯಂಗಾರ್ ಮತ್ತು ರಂಗನಾಯಕಮ್ಮ ದಂಪತಿಯ ಪುತ್ರಿ 84 ವರ್ಷದ ಜಿ.ಲಕ್ಷಮ್ಮ ಅವರು ಮೈಸೂರಿನಲ್ಲಿರುವ 80x50 ಚದರ ಅಡಿ ವಿಸ್ತೀರ್ಣದ ಮನೆ ಮಲ್ಲೇಶ್ವರದಲ್ಲಿರುವ ಅಪಾರ್ಟ್‌ಮೆಂಟ್ ಬ್ಯಾಂಕ್‌ ಖಾತೆಯಲ್ಲಿರುವ ₹ 6 ಕೋಟಿ ಹಾಗೂ ಚಿನ್ನ ಬೆಳ್ಳಿಯ ಆಭರಣಗಳನ್ನು ಇಲಾಖೆಗೆ ದಾನ ಮಾಡಲು ನೋಂದಣಿ ಮಾಡಿಸಿ ಪತ್ರವನ್ನು ಇಲಾಖೆಗೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT